Select Your Language

Notifications

webdunia
webdunia
webdunia
webdunia

ಸ್ವಂತ ತಾಯಿಯನ್ನು ಕೊಲೆಗೈದು ಹಾಯಾಗಿ ತೋಟದಲ್ಲಿ ಮಲಗಿದ್ದ ಮಗ! ಕೊಲೆಗೆ ಕಾರಣ ತಿಳಿಯಿರಿ

ಸ್ವಂತ ತಾಯಿಯನ್ನು ಕೊಲೆಗೈದು ಹಾಯಾಗಿ ತೋಟದಲ್ಲಿ ಮಲಗಿದ್ದ ಮಗ! ಕೊಲೆಗೆ ಕಾರಣ ತಿಳಿಯಿರಿ
ಶಿವಮೊಗ್ಗ , ಮಂಗಳವಾರ, 29 ಆಗಸ್ಟ್ 2023 (09:57 IST)
ಶಿವಮೊಗ್ಗ : ಹೆತ್ತ ಮಗನೇ ತಾಯಿಯನ್ನು ಕೊಲೆಗೈದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.

ಸುಲೋಚನಮ್ಮ (60) ಕೊಲೆಯಾದ ತಾಯಿ. ಸಂತೋಷ್ (40) ಕೊಲೆಗೈದ ಆರೋಪಿಯಾಗಿದ್ದು, ತಾಯಿಯನ್ನು ಹತ್ಯೆ ಮಾಡಿದ ಬಳಿಕ ಜಮೀನಿನಲ್ಲಿ ಮಲಗಿದ್ದ. ಪಕ್ಕದ ಮನೆಯವರು ಸುಲೋಚನಮ್ಮಗೆ ಊಟ ಕೊಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳಿನಿಂದ ನಿರಂತರವಾಗಿ ಮಾಡಿದ್ದಾದ್ರು ಏನು?