Webdunia - Bharat's app for daily news and videos

Install App

ಗುಂಡಿಮುಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಸಾರ್ವಜನಿಕರು- ಗುಂಡಿಮುಕ್ತ ದಾವಣಗೆರೆ

Webdunia
ಗುರುವಾರ, 10 ನವೆಂಬರ್ 2022 (17:44 IST)
ಗುಂಡಿ ಮುಚ್ಚುವ ಅಭಿಯಾನಕ್ಕೆ ದಾವಣಗೆರೆ ಗೆಳೆಯರು ಕೈ ಜೋಡಿಸಿದ್ದಾರೆ.ಗುಂಡಿ ಮುಕ್ತ ನಗರವನ್ನಾಗಿ ಮಾಡೋಣ ಬನ್ನಿ ಎಂಬ ಧ್ಯೇಯ ವಾಕ್ಯದೊಂದಿಗೆ ಗೆಳೆಯರು ಸಹಕರಿಸಲು ಮುಂದಾದರು.ಮೊದಲ ಹಂತದಲ್ಲಿ ರೇಣುಕಾ ಮಂದಿರ ಪಕ್ಕದ ರೈಲ್ವೆ ಕೆಳಸೇತುವೆ ಬಳಿಯಿದ್ದ ಗುಂಡಿ ಮುಚ್ಚುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
 
ಬುಧವಾರ ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ ದೊಡ್ಡದಾದ ಗುಂಡಿಯನ್ನ ಸ್ನೇಹಿತರು ಮುಚ್ಚಿದ್ದಾರೆ.ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚಲು ಜಲ್ಲಿ , ಸಿಮೆಂಟ್ , ಎಂ ಸ್ಯಾಂಡ್, ಗೆಳೆಯರು ಖರೀದಿಸಿದಾರೆ.ಗುಂಡಿ ಮುಚ್ಚಲು ಅವರಿಗೆ ಚಲಕೆ, ಕೋಡಪಾನ, ಬ್ರಷ್ ನೀಡಿ ಸಾರ್ವಜನಿಕರು ಕೂಡ ಸಹಕರಿಸಿದಾರೆ.ಗುಂಡಿ ಇರುವ ಮಾಹಿತಿ ತಿಳಿಸುವಂತೆ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
 
ದಾವಣಗೆರೆ ನಗರದಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಸಹಕರಿಸಿ ಎಂದು ಮನವಿ ಮಾಡಿದ್ದು,ಅಲ್ಲದೇ ದಾವಣಗೆರೆ ಟೀಮ್ ನವರಾದ ಎಂ ಜಿ ಶ್ರೀಕಾಂತ್. ರೋಹಿತ್ ಜೈನ್. ದೀಪಕ್ ಜೈನ್. ನಿಧಿ. ನವೀನ್ ಕುಮಾರ್ ಆರ್ ಎ ದತ್ತಾತ್ರೇಯ. ಯುವರಾಜ್. ಮೇಘರಾಜ್ ಅಭಿಯಾನದಲ್ಲಿ ಭಾಗಿಯಾಗಿ ಗುಂಡಿಮುಚ್ಚುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments