Select Your Language

Notifications

webdunia
webdunia
webdunia
webdunia

ಜನರಿಗೆ ಮಖ್ಮಲ್ ಮೇಲೆ ಟೋಪಿ ಹಾಕಿದ ಖಾಸಗಿ ಫೈನಾನ್ಸ್

ಜನರಿಗೆ ಮಖ್ಮಲ್ ಮೇಲೆ ಟೋಪಿ ಹಾಕಿದ ಖಾಸಗಿ ಫೈನಾನ್ಸ್
ಕೋಲಾರ , ಗುರುವಾರ, 1 ಆಗಸ್ಟ್ 2019 (17:46 IST)
ಐಎಂಎ ಬಹುಕೋಟಿ ಹಗರಣದ ತನಿಖೆ ನಡೆಯುತ್ತಿರುವಾಗಲೇ, ಇತ್ತ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು ಇದರಿಂದ ಜನರು ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಕೋಲಾರದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಿಂದ ಜನರಿಗೆ ಹಣ ವಂಚನೆ ನಡೆದಿದೆ ಅಂತ ಆರೋಪ ಕೇಳಿಬಂದಿದೆ.
ಬಂಗಾರಪೇಟೆ ಪಟ್ಟಣದ ಷಣ್ಮುಗ ಫೈನಾನ್ಸ್ ಹಾಗೂ ಚಿಟ್ ಫಂಡ್ ಕಂಪನಿಯಿಂದ ಸಾವಿರಾರು ಜನರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಒಂದು ವರ್ಷದ ಹಿಂದೆಯೇ ಈ ಕಂಪನಿ ವಂಚನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಹೂಡಿಕೆಯ ಹಣ ವಾಪಸು ಕೊಡಿಸುವಂತೆ ಕೆಜಿಎಫ್ ಎಸ್. ಪಿ. ಮೊಹಮ್ಮದ್ ಸುಜೀತ್ ಗೆ ಮನವಿ ಮಾಡಲಾಗಿತ್ತು.
ಪ್ರತ್ಯೇಕವಾಗಿ ದೂರು ನೀಡುವಂತೆ ವಂಚನೆಗೆ ಒಳಗಾದವರಿಗೆ ಎಸ್ ಪಿ ಸೂಚನೆ ನೀಡಿದ್ರು.

ಸರ್ಕಾರಿ ನೌಕರರು ಸೇರಿದಂತೆ ಸಾವಿರಾರು ಜನರಿಂದ ಷುಣ್ಮುಗ ಕಂಪನಿಯಲ್ಲಿ ಹಣ ತೊಡಗಿಸುವಿಕೆ ಮಾಡಲಾಗಿದೆ.

ತೆರಿಗೆ ಇಲಾಖೆಯ ಭಯದಿಂದ ದೂರು ಕೊಡಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಬಂಗಾರಪೇಟೆ ಕೋರ್ಟ್ ಗೆ ಹಣ ಕಳೆದುಕೊಂಡವರು ಮೊರೆ ಹೋಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲು ನಾಗರಕ್ಕೆ ಹಾಲು ಹಾಕಬೇಡಿ ಎಂದ ಸ್ವಾಮೀಜಿ