Webdunia - Bharat's app for daily news and videos

Install App

ಗಂಡ ಹೆಂಡತಿ‌ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು‌ ಹೊಟ್ಟೆಯಲ್ಲಿಯೇ ಸಾವು

Webdunia
ಬುಧವಾರ, 24 ಅಕ್ಟೋಬರ್ 2018 (22:56 IST)
ಪತ್ನಿ ಮೇಲೆ ಬೀಸಿದ ಕಲ್ಲು‌ ಎದುರು ಮನೆಯ‌ ಗರ್ಭಿಣಿ ಹೊಟ್ಟೆಗೆ ತಾಗಿದ ಕಾರಣ ಗರ್ಭಿಣಿ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ‌ತಾಲೂಕಿನ ಹುನಕುಂಟೆ ಗ್ರಾಮದಲ್ಲಿ ನಡೆದ ಅವಘಡ ಇದಾಗಿದೆ.
ಗ್ರಾಮದ ಬಸನಗೌಡ ಕವಡಿಮಟ್ಟಿ ಆತನ ಪತ್ನಿ ಜಗಳ ಮಾಡುತ್ತಿದ್ದರು. ಜಗಳದಲ್ಲಿ ಸಿಟ್ಟಿನಿಂದ ಬಸನಗೌಡ ಪತ್ನಿಯತ್ತ ಕಲ್ಲು‌ ಬೀಸಿದ್ದನು. ಆದರೆ ಆ ಕಲ್ಲು ಗುರಿ ತಪ್ಪಿ ಎದುರು ಮನೆಯ ಬಳಿ ಬಟ್ಟೆ ಜೋಡಿಸುತ್ತಿದ್ದ ಗರ್ಭಿಣಿ ರೇಣುಕಾ ರಾಮಣ್ಣ ಬೆಲವಂತ್ರಕಂಟಿ ಹೊಟ್ಟೆಗೆ ಬಡಿದಿತ್ತು. 

ಹೆರಿಗೆಗಾಗಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಮಗು‌ ಜನನವಾಗಿದೆ.
ಕಲ್ಲಿನ ಏಟು ಬಿದ್ದ ಕಾರಣ ಮಗು ಮೃತಪಟ್ಟಿದೆ ಎಂದ ವೈದ್ಯರು ತಿಳಿಸಿದ್ದಾರೆ. ಪತ್ನಿಯ ಈ ಸ್ಥಿತಿಗೆ ಎದುರು ಮನೆಯ ಬಸನಗೌಡ ಎಸೆದ‌ ಕಲ್ಲು  ತಾಕಿದ್ದೇ ಕಾರಣವೆಂದು ರೇಣುಕಾ ಪತಿ ರಾಮಣ್ಣ ಆರೋಪ ಮಾಡಿದ್ದಾರೆ.

ಬಸನಗೌಡ ಬಂಧನಕ್ಕೆ ಆಗ್ರಹ ಮಾಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments