Select Your Language

Notifications

webdunia
webdunia
webdunia
webdunia

ಖಾಸಗಿ ವಾಹಿನಿ ಕ್ಯಾಮೆರಾಮನ್ ಮೇಲೆ ಪೊಲೀಸರ ದರ್ಪ

ಖಾಸಗಿ ವಾಹಿನಿ ಕ್ಯಾಮೆರಾಮನ್ ಮೇಲೆ ಪೊಲೀಸರ ದರ್ಪ
ವಿಜಯಪುರ , ಬುಧವಾರ, 5 ಸೆಪ್ಟಂಬರ್ 2018 (16:39 IST)
ಖಾಸಗಿ ವಾಹಿನಿ  ಕ್ಯಾಮರಾಮನ್ ಮೇಲೆ ಪೊಲೀಸರು ದರ್ಪ ಮೆರೆದ ಘಟನೆ ನಡೆದಿದೆ. ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರು ಪೊಲೀಸ್ ಪೇದೆಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ಪತ್ರಕರ್ತರ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ.

ಖಾಸಗಿ ವಾಹಿನಿ  ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರು ದರ್ಪ ಮೆರೆದಿದ್ದಾರೆ. ಕ್ಯಾಮೆರಾಮನ್ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರು ಪೊಲೀಸ್ ಪೇದೆಗಳು. ವಿಜಯಪುರ ನಗರದ ಭೂತನಾಳ ಕೆರೆ ರಸ್ತೆಯಲ್ಲಿ ಘಟನೆ ನಡೆದಿದೆ. ಐ ಆರ್ ಬಿ ಪೊಲೀಸ್ ಪೇದೆ ಬಸವರಾಜ ವಡ್ಡರ ಹಾಗೂ ಇತರೆ ಮೂವರಿಂದ ಹಲ್ಲೆ ನಡೆದಿದೆ.

ಭೂತನಾಳ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಹಲ್ಲೆಯಾಗಿದೆ. ಐ ಆರ್ ಬಿ ವ್ಯಾನ್ ನಲ್ಲಿದ್ದ ಪೊಲೀಸರಿಂದ ಬೈಕ್ ಮೇಲೆ ಹೊರಟಿದ್ದವನ ಮೇಲೆ ಏಕಾಏಕಿ ಹಲ್ಲೆ ನಡೆದಿದೆ. ಕ್ಯಾಮರಾಮನ್ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಐ ಆರ್ ಬಿ ವ್ಯಾನ್ ಮೈಮೇಲೆ ಹತ್ತಿಸಲು ಪೊಲೀಸ್ ವಾಹನ ಚಾಲಕ ಯತ್ನಿಸಿದ್ದಾನೆ. 

ಈ ಕುರಿತು ಪ್ರಶ್ನಿಸಿದ ಸುರೇಶ ಮೇಲೆ ನಾಲ್ವರಿಂದ ಹಲ್ಲೆ ನಡೆದಿದೆ. ಐ ಆರ್ ಬಿ ವ್ಯಾನ್ ನಲ್ಲಿ ಎಳೆದೊಯ್ದು, ವ್ಯಾನ್ ಒಳಗಡೆಯೇ ಹಲ್ಲೆ ನಡೆಸಿ ದರ್ಪವನ್ನು ಪೊಲೀಸರು ತೋರಿದ್ದಾರೆ. ಗಾಯಗೊಂಡ ಕ್ಯಾಮರಾಮನ್ ಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದ ಜಾರಕಿಹೊಳಿ!