Select Your Language

Notifications

webdunia
webdunia
webdunia
webdunia

ಸಿದ್ದು ಸೋಲಿಸಲು ಸ್ವಪಕ್ಷ ಸೇರಿ ವಿಪಕ್ಷಗಳ ಪ್ಲಾನ್

ಸಿದ್ದು ಸೋಲಿಸಲು ಸ್ವಪಕ್ಷ ಸೇರಿ ವಿಪಕ್ಷಗಳ ಪ್ಲಾನ್
ಕೋಲಾರ , ಮಂಗಳವಾರ, 15 ನವೆಂಬರ್ 2022 (10:49 IST)
ಕೋಲಾರ : ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಕೋಲಾರ ಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಈವರೆಗೂ ಖಚಿತ ಪಡಿಸಿಲ್ಲ.
 
ಕ್ಷೇತ್ರದಲ್ಲಿ ನಾಡಿಮಿಡಿತ ಅರಿಯುವುದಕ್ಕೆ ಬಂದ ಸಿದ್ದರಾಮಯ್ಯ ಭೇಟಿ ಕೊಲಾರ ಕ್ಷೇತ್ರದಲ್ಲಿ ಸಂಚಲನ, ವಿರೋಧಿ ನಾಯಕರಿಗೆ ತಳಮಳ ಆರಂಭವಾಗಿದೆ.

ಹೌದು, ರಾಜ್ಯದಲ್ಲಿ ಈಗ ಚುನಾವಣೆ ಹತ್ತಿರವಾಗುತ್ತಿದ್ದು ದಿನೇದಿನೇ ಚರ್ಚೆಗಳು ಗರಿಗೆದರುತ್ತಿವೆ. ಅದರಲ್ಲೂ ಚಿನ್ನದ ನಾಡು ಕೋಲಾರದ ಜಿಲ್ಲಾ ಕೇಂದ್ರ ಕೋಲಾರ ಈಗ ಸಾಕಷ್ಟು ಗಮನಸೆಳೆಯುತ್ತಿದೆ.

ಕಾರಣ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಾರೆ ಎನ್ನೋದು. ಸ್ಪರ್ದೆಯನ್ನು ಈವರೆಗೂ ಖಚಿತಪಡಿಸದ ಸಿದ್ದು ಸಂಪೂರ್ಣವಾಗಿ ತಳ್ಳಿಯೂ ಹಾಕಿಲ್ಲ. ನಿನ್ನೆ ಕೋಲಾರಕ್ಕೆ ಬಂದಾಗಲೂ ಸಹ ಸ್ಪರ್ದೆ ಖಚಿತ ಪಡಿಸಿಲ್ಲ.

ಆದ್ರೆ ಈಗಾಗಲೆ ವಿರೋಧಿಗಳ ಪಾಳಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಪ್ರತಿಕ್ರಿಯೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಇಲ್ಲಿಗೆ ಬಂದರೆ ಸೋಲಿಸುತ್ತೇವೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಸ್ ಅಧಿಕಾರಿಗಳ ವರ್ಗಾವಣೆ