Select Your Language

Notifications

webdunia
webdunia
webdunia
webdunia

ಈ ಟೈಮ್ ನಲ್ಲಿ ಮಾತ್ರ ಅಂಗಡಿಗಳು ಓಪನ್ ಇರಬೇಕು ಎಂದ ಡಿಸಿ

ಈ ಟೈಮ್ ನಲ್ಲಿ ಮಾತ್ರ ಅಂಗಡಿಗಳು ಓಪನ್ ಇರಬೇಕು ಎಂದ ಡಿಸಿ
ಉಡುಪಿ , ಮಂಗಳವಾರ, 28 ಏಪ್ರಿಲ್ 2020 (19:07 IST)
ರಾಜ್ಯ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಈ ಟೈಮ್ ನಲ್ಲಿ ಮಾತ್ರ ಅಂಗಡಿಗಳು ಓಪನ್ ಆಗಿರಬೇಕು.
 

ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಲಾಕ್ ಡೌನ್ ಸಡಿಲ ಮಾಡಿರುವುದು ಆರ್ಥಿಕ ಪುನಶ್ಚೇತನಕ್ಕಾಗಿ. ಹಾಗಾಗಿ ಅದು ಸಡಿಲಿಕೆ ಆಗಿದೆ ಎಂದು ಸ್ವೇಚ್ಛಾಚಾರ ಮಾಡಬೇಡಿ. ಮೇ 3 ರವರೆಗೆ ಕಾನೂನು ಪಾಲನೆ ಮಾಡುತ್ತಾ ಜಿಲ್ಲಾಡಳಿತದ ಜೊತೆ ಸಹಕರಿಸಿ ಎಂದಿದ್ದಾರೆ.  

ಗ್ರೀನ್ ಝೋನ್ ವ್ಯಾಪ್ತಿಯ ಎಲ್ಲಾ ಕೆಲಸಗಳು ಆರಂಭಗೊಳ್ಳಲಿವೆ. ಆದರೆ ಗ್ರೀನ್ ಝೋನ್ ಎಂದು ಬೇಕಾಬಿಟ್ಟಿ ಓಡಾಡುವಂತಿಲ್ಲ. ಮೇ 3 ರ ತನಕ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಅನಗತ್ಯವಾಗಿ ತಿರುಗಾಡುವ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಾಗಿಲಿಗೆ ಬರುತ್ತಿವೆ ತಾಜಾ ಹಣ್ಣುಗಳು