Webdunia - Bharat's app for daily news and videos

Install App

ನಿವೇಶಕ್ಕಾಗಿ ಶಾಸಕನ ಕಾಲಿಗೆ ಬಿದ್ದ ವೃದ್ಧೆ

Webdunia
ಶನಿವಾರ, 21 ಜುಲೈ 2018 (18:44 IST)
ಅವರು ವಯೋವೃದ್ಧೆ. ಆದರೇನಂತೆ ಅವರ ಸಮಸ್ಯೆ ಹಲವು ವರ್ಷಗಳಿಂದ ಬಗೆ ಹರಿದಿರಲಿಲ್ಲ. ಹೀಗಾಗಿ ಕೊನೆಗೆ ನಡು ರಸ್ತೆಯಲ್ಲಿಯೇ ಶಾಸಕನ ಕಾಲಿಗೆ ಎರಗಿ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದರು.

ಮೂಡಿಗೆರೆ ಶಾಸಕನ ಪರಿ ಪರಿಯಾಗಿ ಬೇಡಿಕೊಂಡು ಮಹಿಳೆಯೊಬ್ಬಳು ಕಾಲಿಗೆರಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕಾಲಿಗೆ ಬಿದ್ದ ಗಿರಿಜನ ಮಹಿಳೆ ಶಿವಮ್ಮ ತಮ್ಮ ಸಮಸ್ಯೆ ಪರಿಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಬಳಿ ಶಾಸಕನ ಅಡ್ಡಗಟ್ಟಿ ನಿವೇಶನದ ಬೇಡಿಕೆ ಇಟ್ಟು ಕಾಲಿಗೆ ಬಿದ್ದ ಶಿವಮ್ಮ ವಿನಂತಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೂರಿಗಾಗಿ ಅಲೆಯುತ್ತಿರುವ ಮಹಿಳೆ, ಶಾಸಕ ಕುಮಾರಸ್ವಾಮಿ ಕಂಡು ಅಡ್ಡಗಟ್ಟಿ ನಿಲ್ಲಿಸಿ ಪ್ರಶ್ನೆಗಳ ಸುರಿಮಳೆ ಹಾಕಿ ಪೇಚಿಗೆ ಸಿಲುಕಿಸಿದ್ದಾಳೆ. ತರಾಟೆಗೂ ತೆಗೆದುಕೊಂಡಿದ್ದಾಳೆ.

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ  ಮಹಿಳೆಯರ ಕಾಟ ತಪ್ಪಿದಂತಿಲ್ಲ. ಹೋದಲೆಲ್ಲಾ ಸರ್ಕಾರದ ಯೋಜನೆಗಳ ಬಗ್ಗೆ ತರಾಟೆಗೆ ತೆಗೆದುಕೊಳ್ಳುತ್ತಿರುವ ನಾರಿಯರು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅನ್ನಭಾಗ್ಯ ಯೋಜನೆ  ಅಕ್ಕಿ ಕಡಿತದ ಬಗ್ಗೆ ನಡುರಸ್ತೆಯಲ್ಲಿ ಬೆವರಿಳಿಸಿದ್ದ ಸುಬ್ಬಮ್ಮ ಎಂಬ ಮಹಿಳೆ ಗಮನ ಸೆಳೆದಿದ್ದರು. ಈಗ ಶಿವಮ್ಮ, ಶಾಸಕರನ್ನು ತರಾಟೆಗೆ ತೆಗೆದುಕೊಂಡು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾಳೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments