Select Your Language

Notifications

webdunia
webdunia
webdunia
webdunia

ಸಿದ್ರಾಮಯ್ಯ ಕರೆದ್ರೂ ಬಿಜೆಪಿ ಬಿಡೋಲ್ಲ ಎಂದು ಶಾಕ್ ನೀಡಿದ ಶಾಸಕ

ಸಿದ್ರಾಮಯ್ಯ ಕರೆದ್ರೂ ಬಿಜೆಪಿ ಬಿಡೋಲ್ಲ ಎಂದು ಶಾಕ್ ನೀಡಿದ ಶಾಸಕ
ವಿಜಯಪುರ , ಬುಧವಾರ, 1 ಮೇ 2019 (18:34 IST)
ನಾನು ಕಾಂಗ್ರೆಸ್ ಸೇರುವ ಕುರಿತು ಹರಿದಾಡುತ್ತಿರುವ ಆಡಿಯೋ ಸುಳ್ಳು.ನಾನು ಬಿಜೆಪಿ ಕಾರ್ಯಕರ್ತ.ಯಡಿಯೂರಪ್ಪ ಅವರ ನಿಷ್ಠಾವಂತ ಬೆಂಬಲಿಗ. ಹೀಗಂತ ಬಿಜೆಪಿ ಶಾಸಕ ಹೇಳಿಕೊಂಡಿದ್ದಾರೆ.

ದೇವಾನಂದ ಚವ್ಹಾಣ ಹಾಗೂ ಇನ್ನೊಬ್ಬರ ನಡುವೆ ನಡೆದ ಆ ಸಂಭಾಷಣೆ ನನಗೆ ಸಂಬಂಧಿಸಿದಲ್ಲ‌. ಶಾಸಕರ ತೆಜೋವಧೆ ಮಾಡಿದ್ದು, ನನಗೆ ನಿನ್ನೆಯಿಂದ ತೊಂದರೆಯಾಗಿದೆ. ನಾನು ಯಾವತ್ತೂ ಬಿಜೆಪಿ ಬಿಡಲ್ಲ, ನಾನು ಶಾಸಕನಾಗಲು ಬಿಜೆಪಿಯೇ ಕಾರಣ ಎಂದರು.

ದೇವಾನಂದ ಚವ್ವಾಣ ಅವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಎಂ.ಎಸ್.ಐ.ಎಲ್ ಕಾನೂನು ಚೌಕಟ್ಟಿನಲ್ಲಿ ಮಾಡುತ್ತಿದ್ದೇನೆ. ಒಂದೆ ಕೋಮಿನ ಜನರು ಅಲ್ಲಿ ಜಗಳವಾಡಿದ್ದು ನನಗೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ನಾನು ಮಾತಾಡಿದ್ದರೆ ಪಕ್ಷ ಏನೇ ಶಿಕ್ಷೇ ಕೊಟ್ಟರು ನಾನು ಅದನ್ನು ಸ್ವೀಕರಿಸುತ್ತೇನೆ ಎಂದರು.  

ನಾನು ಸಿದ್ದರಾಮಯ್ಯ ಬಂದು ಕರೆದರೂ ಬಿಜೆಪಿ ಬಿಟ್ಟು ಹೋಗಲ್ಲ. ರಾಜಕೀಯೇತರ ಸಂಬಂಧ ನಮ್ಮ ತಂದೆಯವರ ಕಾಲದಿಂದಲೂ ಎಂ.ಬಿ.ಪಾಟೀಲ್ ಅವರ ಜೊತೆ ಇದೆ. ದೇವಾನಂದ ಚವ್ವಾಣ ಆಡಿಯೋದಲ್ಲಿ ಅಪರಾಧಿಯಾಗಿದ್ದಾರೆ.

ಆಡಿಯೋ ಸತ್ಯಾಸತ್ಯತೆ ಬಗ್ಗೆ ಪರೀಶಿಲನೆ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ದೇವರ ಹಿಪ್ಪರಗಿ, ಮುಳಸಾವಳಗಿ ಸೇರಿದಂತೆ ನಾಲ್ಕು ಕಡೆ ಎಂ.ಎಸ್.ಐ.ಎಲ್ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಹೀಗಂತ ಮಾಧ್ಯಮಗೋಷ್ಠಿಯಲ್ಲಿ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಡಿಯೋದಲ್ಲಿ ಬೆತ್ತಲಾದ ಟ್ರಾಫಿಕ್ ಪೊಲೀಸರ ಕರ್ಮಕಾಂಡ