Select Your Language

Notifications

webdunia
webdunia
webdunia
webdunia

ಮೋದಿ ತಕರಾರು ಮಾಡಿದರೆ ನನಗೆ ಹೇಳಿ ಎಂದ ಸಚಿವ

ಮೋದಿ ತಕರಾರು ಮಾಡಿದರೆ ನನಗೆ ಹೇಳಿ ಎಂದ ಸಚಿವ
ಕೊಡಗು , ಬುಧವಾರ, 19 ಜೂನ್ 2019 (16:24 IST)
ಮೋದಿ ಆಕ್ಷೇಪ ಮಾಡಿದ್ರೆ ನಂಗೆ ಹೇಳಿ ಎಂದ ಕಂದಾಯ ಸಚಿವ ಹೇಳಿದ್ದಾರೆ.

ಎಸ್ಸಿ ಎಸ್ಟಿ ಕಾಲೊನಿಗಳಿಗೆ ವಿದ್ಯುತ್ ಪೂರೈಕೆಗೆ ಅರಣ್ಯ ಇಲಾಖೆ ಆಕ್ಷೇಪ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೊಡಗಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಹಾಗೂ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಶಾಸಕ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಫ್, ಸಿಸಿಎಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ.

ವಾಟ್ ಈಸ್ ದಿಸ್ ನಾನ್ಸೆನ್ಸ್ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ ಕಂದಾಯ ಸಚಿವ ದೇಶಪಾಂಡೆ. ತಕ್ಷಣವೇ ಎಸ್ಸಿ ಎಸ್ಟಿ ಕಾಲೋನಿಗಳಿಗೆ ವಿದ್ಯುತ್ ಕೊಡಿ. ಇಲ್ಲದಿದ್ರೆ ಅರಣ್ಯ ಹಾಗೂ ವಿದ್ಯುತ್ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಎಚ್ಚರಿಕೆ ನೀಡಿದ್ರು.
ಇಂತಹ ಕಾಲೋನಿಗೆ ವಿದ್ಯತ್ ಕೊಡೋಕೆ ಮೋದಿ ಕೂಡ ಆಕ್ಷೇಪ ಮಾಡಲ್ಲ. ಮೋದಿ ಆಕ್ಷೇಪ ಮಾಡಿದ್ರೆ ನಂಗೆ ಹೇಳಿ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ  ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಪೊಲೀಸ್ ರಿಂದ ಪೊಲೀಸರಿಗೇ ದೋಖಾ? ಕೋಟ್ಯಂತರ ಗೋಲ್ ಮಾಲ್ ಶಂಕೆ!