Webdunia - Bharat's app for daily news and videos

Install App

ಮತ್ತೆ ಭುಗಿಲೆದ್ದ ಅಷ್ಟ ಮಠಗಳ ನಡುವಿನ ಮುಸುಕಿನ ಗುದ್ದಾಟ

Webdunia
ಬುಧವಾರ, 4 ಜುಲೈ 2018 (17:23 IST)
ಅಷ್ಟ ಮಠಗಳ ನಡುವಿನ ಮುಸುಕಿನ ಗುದ್ದಾಟ ಮತ್ತೆ ಭುಗಿಲೆದ್ದಿದೆ. ಶೀರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಲು ಪರ್ಯಾಯ ಪಲಿಮಾರು ಮಠಾಧೀಶರು ನಿರಾಕರಿಸುವುದರೊಂದಿಗೆ ಶೀರೂರು ಮಠದೊಂದಿಗಿನ ಸಂಘರ್ಷ ತೀವ್ರತೆಯನ್ನು ಪಡೆದುಕೊಂಡಿದೆ.

ಶೀರೂರು ಮಠಕ್ಕೆ ಶಿಷ್ಯ ಸ್ವೀಕಾರ ಮಾಡದೇ ಪಟ್ಟದ ದೇವರನ್ನು ಹಿಂದಿರುಗಿಸುವುದಿಲ್ಲ ಎಂದು ಪಲಿಮಾರು ಶ್ರೀಗಳ ನಿಲುವಿಗೆ ಇತರ ಮಠಾಧೀಶರು ಕೂಡಾ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಈ ವಿವಾದ ಮತ್ತಷ್ಟು ಕಗ್ಗಂಟಾಗಿದೆ. ನಿನ್ನೆ ಪೇಜಾರ ಮಠದ ವಿಶ್ವೇಶ ತೀರ್ಥರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಪಟ್ಟದ ದೇವರನ್ನು ಹಿಂದಿರುಗಿಸಬೇಕಾದರೆ ಶಿಷ್ಯ ಸ್ವೀಕಾರ ಮಾಡಿ ಎಂದು ಲಕ್ಷ್ಮೀವರ ತೀರ್ಥರಿಗೆ ತಾಕೀತು ಮಾಡಿದ್ದಾರೆ.

ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ತಮ್ಮ ಆರೊಗ್ಯ ಹದಗೆಟ್ಟ ಹಿನ್ನೆಯಲ್ಲಿ ದೈಹಿಕ ಪೂಜಾ ಕೈಂಕರ್ಯ ನೆಸವೇರಿಸಲು ಪಟ್ಟದ ದೇವರನ್ನು ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥರ ಸುಪರ್ಧಿಗೆ ವಹಿಸಿದ್ದರು. ಈಗ ಆರೋಗ್ಯ ಸುದಾರಿಸಿದ ಬಳಿಕ ಪಟ್ಟದ ದೇವರನ್ನು ಮರಳಿಸಲು ಲಕ್ಷ್ಮಿವರ ತೀರ್ಥರು  ಕೇಳಿದ್ದೇ  ವಿವಾದಕ್ಕೆ ನಾಂದಿಮಾಡಿದಂತಾಗಿದೆ. ಈ ಬೆಳವಣಿಗೆಗಳ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಲಿಮಾರು ಪರ್ಯಾಯ ಸ್ವಾಮಿಜಿಗಳು, ಈ ವಿವಾದದ ಕುರಿತಂತೆ ಶೀಘ್ರವೇ ಇತರ ಮಠಾಧೀಶರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದ್ರು. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments