Webdunia - Bharat's app for daily news and videos

Install App

ಮನುಷ್ಯ ಅರಿವು ಬುದ್ದಿವಂತ ಉಳ್ಳವ: ಸಂಸದ ತೇಜಸ್ವಿ ಸೂರ್ಯ

Webdunia
ಬುಧವಾರ, 27 ಅಕ್ಟೋಬರ್ 2021 (21:06 IST)
ಬೆಂಗಳೂರು: ಯುವ ಕಲಾವಿದರಾದ ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್ ರವರು ಯುವ ಪ್ರತಿಭಾವಂತ ಚಿತ್ರಕಾರರು ಮತ್ತು ಸಾಮಾಜಿಕ ಕಳಕಳಿ ಇರುವ ಯುವ ಪ್ರತಿಭೆಗಳು. ದೇವರ ನಮಗೆ ಯೋಗ ಕೊಟ್ಟಿರುತ್ತಾನೆ ಅದನ್ನ ಉಳಿಸಿ, ಬೆಳಸಿಕೊಳ್ಳಬೇಕು. ಮನುಷ್ಯ ಅರಿವು ಹೊಂದಿದ್ದು, ಬುದ್ದಿವಂತನಾಗಿದ್ದಾನೆ  ಉಪಯೋಗದ ದಾರಿ ಸರಿಯಾಗಿರಬೇಕು ಎಂದು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ತಿಳಿಸಿದರು. 
 
ಪರಿಸರ ಸಂರಕ್ಷಣೆಯ ವಿಷಯವನ್ನು ಅನ್ವೇಷಿಸುವ ಪ್ರದರ್ಶನ ಮತ್ತು ಚಿತ್ರ ಕಲೆಯ ಮಾರಾಟ ಹಾಗೂ ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪಾತ್ರ ಫೌಂಡೇಶನ್‌ಗೆ ನೀಡುವ ಕಾರ್ಯಕ್ರಮ ನೆಡಯಿತು.  
 
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಕನ್ನಡದ ಖ್ಯಾತ ಚಲನಚಿತ್ರ ನಟ,ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್,  ಲೋಕಸಭಾ ಸದಸ್ಯ, ರಾಷ್ಟೀಯ ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಕಲ್ಯಾಣ್ ಜ್ಯುವೆಲರ್ಸ್ ಎಂ.ಡಿ.ರಾಜೇಶ್ ಕಲ್ಯಾಣ ರಾಮನ್, ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್  ಹಿರಿಯ ವರ್ಣ ಚಿತ್ರ ಕಲಾವಿದ ಡಾ.ರೋಶನ್ ಬಾಬಿರವರು ಪ್ರದರ್ಶನವನ್ನು ಉದ್ಘಾಟನೆ ಮಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ 
ಬುಧವಾರ ಕಾರ್ಯಕ್ರಮ ಜರುಗಿತು. 
 
ಮುಂದುವರೆದು ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತಿಹಾಸದ ಬೆಳದಂತೆ ವರ್ಣ ಚಿತ್ರಕಲೆ ಬೆಳೆಯುತ್ತಾ ಬಂತು. ಕವಿರತ್ನ ಕಾಳಿದಾಸ ಕವನದಲ್ಲಿ ಚಿತ್ರಕಲೆ ಬಗ್ಗೆ ವರ್ಣನೆ ಮಾಡಿದ್ದಾನೆ .ವರ್ಣ ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮಾನಸ ಚಿತ್ರಕಲೆ ಇನ್ನು ಬೆಳಗಲಿ ನಾಡಿಗೆ ಕೀರ್ತಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.  
 
ಕಲಾವಿದರಾದ ಋಷಿಕೇಷ್ ಮತ್ತು ಮಾನಸ ಕಲ್ಯಾಣ್ ಅವರ ಆಧುನಿಕ ಪ್ರಪಂಚದ ವ್ಯಾಖ್ಯಾನ ಕಲಿಯುಗ್ ೨.೦ ಆಗಿದೆ ಎಂದರು.
 
ಚಲನಚಿತ್ರ ನಟ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ  ಮಾತನಾಡಿ ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಆಗ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟರು. 
 
ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮತ್ತು ಮಾನಸ ತಮ್ಮ ಸಮಯವನ್ನು ಸಮಾಜದ ಒಳಿತಿಗಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಕಲೆಯು ಹೃದಯಕ್ಕೆ ಹತ್ತಿರದ ಸಂಭಂದ ಇರುತ್ತದೆ. ಯುವ ಪ್ರತಿಭೆಗಳು ರಚಿಸಿದ ಚಿತ್ರಕಲೆ ಸಮಾಜದ ಮೇಲೆ ಬೆಳಕು ಚಲ್ಲುತ್ತಿದೆ ಎಂದು ಹೇಳಿದರು.
 
ಕಲಿಯುಗ್ ಸರಣಿಯ ಯುವ ವರ್ಣಚಿತ್ರಕಾರ ಮಾಸ್ಟರ್ ಋಷಿಕೇಷ್ ಕಲ್ಯಾಣ್  ಮಾತನಾಡಿ ಮನುಕುಲವು ಹಲವಾರು ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆಯ ಬಿಕ್ಕಟ್ಟು ತಕ್ಷಣದ ಬೆದರಿಕೆಯಾಗಿ ಹೊರಹೊಮ್ಮಿದ್ದು ವಿಶ್ವದಾದ್ಯಂತ ಜೀವ ಮತ್ತು ಆಸ್ತಿಯನ್ನು ನಾಶಪಡಿಸುತ್ತಿದೆ. ಹವಾಮಾನ ಬದಲಾವಣೆಯ ಪರಿಸ್ಥಿತಿಯು ಹದಗೆಡುತ್ತಿದಂತೆ, ಹವಾಮಾನದ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳು ಸಸ್ಯ ಮತ್ತು ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಸಮುದಾಯಗಳು ಮತ್ತು ಜೀವನೋಪಾಯಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಥವಾ ಅದರ ತೀವ್ರತೆ ಹಿಮ್ಮೆಟ್ಟಿಸಲು, ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡುವ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆಯೆಂದು ನಾವು ಬಲವಾಗಿ ನಂಬುತ್ತೇವೆ ಎಂದು ಹೇಳಿದರು.
 
ನಮ್ಮ ಚಿತ್ರ ಕಲಾಕೃತಿಗಳ ಮೂಲಕ, ನಾವು ಇರುವ ಸದ್ಯದ ಕಲಿಯುಗದ ಅಪಾಯಗಳನ್ನು ಪ್ರದರ್ಶಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ನಮ್ಮ ಸುತ್ತಮುತ್ತಲಿನ ಸಮುದಾಯಗಳು ಮತ್ತು ಸಮಾಜಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವತ್ತ ಸಣ್ಣ ಹೆಜ್ಜೆಗಳನ್ನು ಇಡಲು ಈ ಪ್ರದರ್ಶನವು ವೀಕ್ಷಕರನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.  
 
ಕಲಿಯುಗ್ 2.0 ವಾಸ್ತವಕ್ಕೆ ತೀರ ಹತ್ತಿರವಾದ ಅನುಭವದ ಮೂಲಕ ತಲೆಮಾರುಗಳವರೆಗೆ ಪ್ರಕೃತಿಯ ವರ್ಣ ವೈಭವವನ್ನು ಸಂರಕ್ಷಿಸುವ ಸುತ್ತಲೂ ಚರ್ಚೆ ನಡೆಯುವ ಉದ್ದೇಶವನ್ನು ಈ ಪ್ರದರ್ಶನವು ಹೊಂದಿದೆ. ಕಲಾ ಪ್ರದರ್ಶನ ಮತ್ತು ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪತ್ರ ಫೌಂಡೇಷನ್‌ಗೆ ದೇಣಿಗೆ ನೀಡಲಾಗುವುದು ಎಂದು ಹೇಳಿದರು.
 
ಈ ಚಿತ್ರಪ್ರದಶನವನ್ನು ಉಪ ಪೊಲೀಸ್ ಆಯುಕ್ತ ಮುರುಗನ್ ವೀಕ್ಷಿಸಿ ಇಬ್ಬರು ಇವ ಕಲಾವಿದರನ್ನು ಶ್ಲಾಘಿಸಿದರು.
filam

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

Good News: ಒಂದೇ ದಿನದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಇಳಿಕೆ

ಯೂಟ್ಯೂಬರ್ ವಿಡಿಯೋದಲ್ಲಿ ಸೆರೆಯಾಯಿತು ಸೋನಮ್ ಜತೆಗಿನ ರಾಜಾ ರಘುವಂಶಿ ಕೊನೆ ಕ್ಷಣದ ವಿಡಿಯೋ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕಿಗೆ ಆಗಿದ್ದೇನು

ಮುಂದಿನ ಸುದ್ದಿ
Show comments