Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲಿ ರಾತ್ರಿ ಮನೆಗಳ‌ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಹುಚ್ಚಾಟ

ಕುಡಿದ ನಶೆಯಲ್ಲಿ ರಾತ್ರಿ ಮನೆಗಳ‌ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಹುಚ್ಚಾಟ
bangalore , ಭಾನುವಾರ, 26 ಸೆಪ್ಟಂಬರ್ 2021 (21:28 IST)
ಬೆಂಗಳೂರು: ಕುಡಿದ ನಶೆಯಲ್ಲಿ ರಾತ್ರಿ ಮನೆಗಳ‌ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದು ಹುಚ್ಚಾಟ ಮೆರೆದಿದ್ದ ಐವರು ಎಂಜಿನಿಯರಿಂಗ್​​ ವಿದ್ಯಾರ್ಥಿಗಳನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳು ಬಿಹಾರ ಮತ್ತು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿರುವ ಇವರು  ಮದ್ಯದ ಮತ್ತಿನಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದರು.
ಬರ್ತ್​ಡೇ ಆಚರಣೆಗೆ ತೆರಳಿದ್ದರು: ಬಂಧಿತರು ರಾಜರಾಜೇಶ್ವರಿ ನಗರದ ಕೃಷ್ಣಾ ಗಾರ್ಡನ್​​ನ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿದ್ದ ಸ್ನೇಹಿತನ ಬರ್ತ್​ಡೇ ಹಿನ್ನೆಲೆ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ತೆರಳಿದ್ದರು. ರಾತ್ರಿ 2 ಗಂಟೆ‌ ವೇಳೆ‌ಗೆ ಪಾರ್ಟಿ ಮುಗಿಸಿ ಬರುವಾಗ ಮದ್ಯದ ನಶೆಯಲ್ಲಿ ಬ್ಯಾಟ್​ನಿಂದ ಮನೆ‌ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದಿದ್ದರು. ರಾಜರಾಜೇಶ್ವರಿ ನಗರ ಹಾಗೂ‌ ಕೆಂಗೇರಿ ಪೊಲೀಸ್​ ಠಾಣೆ ವ್ಯಾಪ್ತಿ ಸೇರಿದಂತೆ 14 ಕಾರುಗಳ ಗಾಜು ಜಖಂ ಮಾಡಿದ್ದರು.‌
ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಬಂಧಿತರಲ್ಲಿ ಮೂವರು ಸ್ಥಳೀಯ ಅಪಾರ್ಟ್​​ಮೆಂಟ್ ಹಾಗೂ ಮತ್ತಿಬ್ಬರು ಹಾಸ್ಟೆಲ್​ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ; ಹಲವೆಡೆ ಯೆಲ್ಲೋ ಅಲರ್ಟ್