ಡ್ರಗ್ಸ್‌ ಕೊಡ್ತೀವಿ ಅಂತ ಕರೆಸಿ ಕಿಡ್ನಾಪ್‌ ಮಾಡಿದ ಖದೀಮರು

geetha
ಭಾನುವಾರ, 25 ಫೆಬ್ರವರಿ 2024 (18:02 IST)
ಬೆಂಗಳೂರು: ಮೊನೀಶ್‌ ಎಂಬ ಟ್ಯಾಟೂ ಕಲಾವಿದ ಡ್ರಗ್ಸ್‌ ದಂಧೆಯನ್ನೂ ನಡೆಸುತ್ತಿದ್ದ. ಈತನ ಬಳಿ ತನ್ನ ಅಣ್ಣನನ್ನು ನೋಡಲು ಬಂದಿದ್ದ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್‌ ಕೊಳ್ಳಲು ಬರುತ್ತಿದ್ದ. ಈತನ ಬಳಿ ಸಾಕಷ್ಟು ಹಣವಿರಬೇಕೆಂದು ಭಾವಿಸಿದ ಮೊನೀಶ್‌ ತನ್ನ ಸ್ನೇಹಿತರೊಡಗಗೂಡಿ ಆತನನ್ನು ಅಪಹರಿಸಲು ಸ್ಕೆಚ್‌ ಹಾಕಿದ್ದರು. ಮೊನೀಶ್‌ ತನ್ನ ಸ್ನೇಹಿತರಾದ ಲೋಕೇಶ್‌, ಕಿಶೋರ್‌, ರವಿ, ದಿಲೀಪ್‌, ಸತೀಶ್‌ ರ ಜೊತೆಗೂಡಿ ವಿದೇಶಿ ಪ್ರಜೆಯನ್ನು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿದ್ದ. ಬಳಿಕ ಅವರಿಂದ 1 ಲಕ್ಷ ರೂ. ಹಣವನ್ನೂ ಕಿತ್ತಿದ್ದ. 
 
ಅಲ್ಲಿಂದ ತಪ್ಪಿಸಿಕೊಂಡಿದ್ದ ವಿದೇಶಿ ಪ್ರಜೆ ತನ್ನ ಮೇಲೆಯೂ ಡ್ರಗ್ಸ್‌ ಸೇವನೆ ಕೇಸ್‌ ಪ್ರಕರಣ ದಾಖಲಾಗಬಹುದೆಂಬ ಭಯದಿಂದ ದೂರು ನೀಡಿರಲಿಲ್ಲ. 15 ದಿನಗಳ ಬಳಿಕ ತನ್ನ ಪರಿಚಿತ ಪೊಲೀಸ್‌ ಸಿಬ್ಬಂದಿಗೆ ಈ ವಿಷಯ ತಿಳಿಸಿದಾಗ ಪ್ರಕರಣ ಹೊರಬಿದ್ದಿದೆ. ವಿದೇಶಿ ಪ್ರಜೆಯನ್ನು ಡ್ರಗ್ಸ್‌ ನೀಡುವುದಾಗಿ ಕರೆಸಿ ಅಪಹರಣ ನಡೆಸಿದ್ದ ತಂಡವನ್ನು ಬಂಧಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

25 ಪ್ರಕರಣಗಳಲ್ಲಿ ನ್ಯಾಯಾಲಯದ ವಾರೆಂಟ್ ತಪ್ಪಿಸಿ ಪರಾರಿಯಾಗಿದ್ದವ ಕೊನೆಗೂ ಅರೆಸ್ಟ್‌

MGNREGA ಮರುನಾಮಕರಣದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಕಿಡಿ, ನಾಳೆಯಿಂದ ಪ್ರತಿಭಟನೆ

ದಿಡೀರನೆ ದೆಹಲಿ ಜನತೆ ಬಳಿ ಕ್ಷಮೆಯಾಚಿಸಿದ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಿಡ್ನಿ ಗುಂಡಿನ ದಾಳಿಕೋರರಲ್ಲಿ ಒಬ್ಬಾತ ಹೈದರಾಬಾದ್‌ ಮೂಲದವ, ಇಲ್ಲಿದೆ ಮಾಹಿತಿ

ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಧಾಂದಲೆ: ಪ.ಬಂಗಾಳ ರಾಜಕೀಯದಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments