Select Your Language

Notifications

webdunia
webdunia
webdunia
webdunia

ಬ್ಯಾಂಕ್ ಕನ್ನ ಹಾಕಿದ ಕದೀಮರು ಹೊತ್ತೋಯ್ದರು ಚಿಲ್ಲರೆ ಮೊತ್ತ

ಬ್ಯಾಂಕ್ ಕನ್ನ ಹಾಕಿದ ಕದೀಮರು ಹೊತ್ತೋಯ್ದರು ಚಿಲ್ಲರೆ ಮೊತ್ತ
kolara , ಶುಕ್ರವಾರ, 27 ಆಗಸ್ಟ್ 2021 (19:17 IST)
ಬೀಗ ಮುರಿದು ಕೆನರಾ ಬ್ಯಾಂಕ್ಗೆ  ತಡ ರಾತ್ರಿ ಖತರ್ನಾಕ್ ಕಳ್ಳರು ಗೋಡೆ ರಂದ್ರ ಕೊರೆದು ಕಳ್ಳತನ ಮಾಡಿರುವ ಘಟನೆ ಜರುಗಿದೆ,  ಕೋಲಾರ  ತಾಲ್ಲೂಕಿನ ಮದನಹಳ್ಳಿ ಯಲ್ಲಿ ಇರುವ ಕೆನರಾ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ ಇನ್ನು ಕಳೆದ ರಾತ್ರಿ  ಐದಾರು ಕಳ್ಳರು ಗುಂಪು ಮದನಹಳ್ಳಿ ಬ್ಯಾಂಕಿಗೆ ನುಗ್ಗಿ ಸಿಸಿ ಕ್ಯಾಮೆರಾ ಹಾಗೂ ಸೈರನ್ ಸಂಪರ್ಕವನ್ನ ಕಡಿತ ಗೊಳಿಸಿ ಕಳ್ಳತ ಮಾಡಿದ್ದು ಬ್ಯಾಂಕಿನಲ್ಲಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿಲ್ಲರೆ ನಾಣ್ಯಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ, ಬ್ಯಾಂಕಿನಲ್ಲಿದ್ದ ಲಾಖರ್ ಹೊಡೆದು ಕಳ್ಳತನಕ್ಕೆ ಯತ್ನಸಿದ್ದು ವಿಫಲವಾದ್ದರಿಂದ ಚಿಲ್ಲರೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಇನ್ನು ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಟಮಕ ಬಳಿ ಇರುವ ಇಂಡಿಯಾ ಎಟಿಎಂ  ಹಾಗೂ ಮಾಸ್ತಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮವೊಂದರಲ್ಲಿದ್ದ ಎಟಿಎಂ ಗಳಿಗೆ  ಗ್ಯಾಸ್ ಕಟ್ಟರ್ ಬಳಿ ಹಣ ದೋಚಿ ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೆ  ಮದಹಳ್ಳಿ ಬಳಿ ಕೆನಾರ್ ಬ್ಯಾಂಕಿಗೆ ಕನ್ನ ಹಾಕಿರುವ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ, ಇನ್ನು ಈ ಘಟನಾ ಸಂಭಂದ ಸ್ಥಳಕ್ಕೆ ಎಸ್ಪಿ, ಶ್ವಾನದಳ ಸೇರಿದಂತೆ ಬೆರಳಷ್ಟು ತಜ್ಞರು ಭೇಟಿ ನೀಡಿ ಪರಿಶೀಲನೆ  ಕಳ್ಳರ ಜಾಡು ಹಿಡಿಯಲು ಬಲೆ ಬೀಸಿದ್ದು, ಘಟನೆ ಸಂಬಂದ  ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಬಿ.ಎಂ.ಪಿ‌ ಯ ವ್ಯಾಪ್ತಿಯಲ್ಲಿ ಇಂದಿನಿಂದ ಲಸಿಕ ಮೇಳ