Select Your Language

Notifications

webdunia
webdunia
webdunia
webdunia

ಕಲ್ಯಾಣಿಗೆ ಇಳಿದ ನ್ಯಾಯಾಧೀಶರು, ಪೊಲೀಸರು

ಕಲ್ಯಾಣಿಗೆ ಇಳಿದ ನ್ಯಾಯಾಧೀಶರು, ಪೊಲೀಸರು
ಬೆಂಗಳೂರು , ಸೋಮವಾರ, 6 ಜನವರಿ 2020 (19:38 IST)
ಹುಳ್ಳ ಕಲ್ಯಾಣಿಗೆ ನ್ಯಾಯಾಧೀಶರ ನೇತೃತ್ವದ ತಂಡ, ಪೊಲೀಸ್ ರು ಇಳಿದು ಗಮನ ಸೆಳೆದರು.
 

ಪಾಳೇಗಾರರ ಆಡಳಿತ ಅವಧಿಯಲ್ಲಿ ನಿರ್ಮಿಸಿದ್ದ ಇತಿಹಾಸ ಪ್ರಸಿದ್ಧ ಹುಳ್ಳ ಕಲ್ಯಾಣಿಯೊಂದರಲ್ಲಿ ಗಿಡಗಂಟೆಗಳು ಬೆಳೆದುಕೊಂಡು ಸಂಪೂರ್ಣ ಹಾಳಾಗಿತ್ತು.

ಕಲ್ಯಾಣಿಯು ಕಾಣದಂತೆ ಅವನತಿಯ ಅಂಚಿಗೆ ತಲುಪಿತ್ತು. ಇದೀಗ ಆ ಕಲ್ಯಾಣಿಗೆ ನ್ಯಾಯಾಧೀಶರ ತಂಡ, ವಕೀಲರ ತಂಡ, ಪೊಲೀಸ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಪುನಶ್ಚೇತನಗೊಳಿಸಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸುರಗಜಕ್ಕನಹಳ್ಳಿ ಪಂಚಾಯತಿ ವ್ಯಾಪ್ತಿಯ ಸಿಡಿಹೊಸಕೋಟೆ ಬಳಿ ಇರುವ ಪುರಾತನ ಕಾಲದ ದೊರೆಸಾನಿ ಕಲ್ಯಾಣಿಯನ್ನು ಅಭಿವೃದ್ಧಿ ಪಡಿಸಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸೋಮಶೇಖರ್ ರೆಡ್ಡಿಯ ತಾಕತ್ ಗೆ ಸವಾಲ್ ಹಾಕಿದ ಜಮೀರ್ ಅಹ್ಮದ್