Webdunia - Bharat's app for daily news and videos

Install App

ನಮ್ಮಮ್ಮನ ಆಣೆ ಎಂದ ಜೆಡಿಎಸ್ ಶಾಸಕ

Webdunia
ಸೋಮವಾರ, 18 ಮಾರ್ಚ್ 2019 (17:52 IST)
ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಆದ್ರೆ ಆಣೆ.. ಹಣೆ ಬರಹದಂತ ಭಾನಾತ್ಮಕ ಮಾತುಗಳು ಚುನಾವಣೆ ಸಂದರ್ಭದಲ್ಲಿ ಈಗ ಬಲವಾಗಿ ಕೇಳಿ ಬರುತ್ತಿವೆ.

ತುಮಕೂರಿನಲ್ಲಿ ಹಾಲಿ ಸಂಸದ ಕಾಂಗ್ರೆಸ್ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಲು ನಮ್ಮಮ್ಮನಾಣೆ  ನಾನು ಕಾರಣ ಅಲ್ಲಾ ಅಂತಾ ಮಾಜಿ ಶಾಸಕ, ಜೆಡಿಎಸ್ ಮುಖಂಡ  ಎಚ್.ನಿಂಗಪ್ಪ ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದಾರೆ. ತುಮಕೂರಿನ ಪಕ್ಷದ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ನಾನು ಮುದ್ದಹನುಮೇಗೌಡರಿಗೆ ಬೇಡ ಅಂತಾ ಎಲ್ಲೂ ಹೇಳಿಲ್ಲಾ. ಹೇಳೋದೂ ಇಲ್ಲಾ. ನಾನು ಯಾರನ್ನೂ ದ್ವೇಷ ಮಾಡಲ್ಲಾ.

ನಮಗೆ ದೇವರು ಏನಿಟ್ಟಿದ್ದಾನೋ ಯಾರಿಗೆ ಗೊತ್ತು. ಅವರವರ ಯೋಗ ಸಾರ್. ಅದನ್ನ ತಪ್ಪಿಸೋಕೆ ಯಾರಿಂದಲೂ ಆಗೋದಿಲ್ಲಾ. ನಾನು ರಾಜಕೀಯದಲ್ಲಿ ಎಷ್ಟು ಹೋರಾಟ ಮಾಡಿಕೊಂಡು ಬಂದಿದೀನಿ. ಆದ್ರೆ ನಾನು ಮಾಜಿಯಾಗಿದ್ದೀನಿ. ಅದೂ ನನ್ನ ಹಣೆಬರಹ. ಮುದ್ದಹನುಮೇಗೌಡರು 10 ವರ್ಷ ಶಾಸಕರಾಗಿ 5 ವರ್ಷ ಸಂಸದರಾಗಿದ್ದಾರೆ. ಅವರು ಚೆನ್ನಾಗಿಯೇ ಇದ್ದಾರೆ. ಅವರು ಅವರ ಹಣೆ ಬರಹ. ಅವರ ಹಣೆ ಬರಹ ಕಿತ್ತುಕೊಳ್ಳಲು ನನ್ನಿಂದಾಗುತ್ತಾ? ಆದ್ರಿಂದ ನಾನು ಅವರನ್ನ ವಿರೋಧ ಮಾಡಿಲ್ಲಾ. ಮಾಡೋದೂ ಇಲ್ಲಾ ಅಂದ್ರು.

ಯಾರೇ ಅಭ್ಯರ್ಥಿಯಾದ್ರೂ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕೆಲಸ ಮಾಡಬೇಕಿದೆ. ಇದು ಮೈತ್ರಿ ಸರ್ಕಾರದ ಮೈತ್ರಿ ಧರ್ಮ ಪಾಲನೆ ನಮ್ಮೆಲ್ಲ ಕರ್ತವ್ಯ ಅಂದ್ರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments