Select Your Language

Notifications

webdunia
webdunia
webdunia
webdunia

ಬಿಜೆಪಿಯ ಅಧಿಕಾರದ ಬಾಗಿಲು ಬಂದ್ ಮಾಡುತ್ತೇವೆ ಎಂದ ಜೆಡಿಎಸ್ ವರಿಷ್ಠ

ಬಿಜೆಪಿಯ ಅಧಿಕಾರದ ಬಾಗಿಲು ಬಂದ್ ಮಾಡುತ್ತೇವೆ ಎಂದ ಜೆಡಿಎಸ್ ವರಿಷ್ಠ
ಬಳ್ಳಾರಿ , ಮಂಗಳವಾರ, 30 ಅಕ್ಟೋಬರ್ 2018 (16:43 IST)
ಭಾರತೀಯ ಜನತಾ ಪಕ್ಷದವರು ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಧಿಕಾರದ ಬಾಗಿಲು ತೆರೆಯುವುದಾಗಿ ಹೇಳುತ್ತಿದ್ದಾರೆ. ಆದರೆ ಆ ಬಾಗಿಲನ್ನು ನಾವು ಬಂದ್ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಉಪಚುನಾವಣೆ ಪ್ರಚಾರ ನಡೆಸಿ ಮತಯಾಚನೆ ಮಾಡಿರುವ ಅವರು, ಬಿಜೆಪಿಗೆ ಸವಾಲು ಹಾಕಿದ್ದಾರೆ. ಬಿಜೆಪಿ ಪಕ್ಷದ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಗಣಿ ಜಿಲ್ಲೆಗೆ ಇಡೀ ಸರಕಾರವೇ ಬಂದಿದೆ ಎಂಬುದು ಆ ಪಕ್ಷದ ತಪ್ಪು ಕಲ್ಪನೆಯಾಗಿದೆ. ಸರಕಾರದ ವಿರುದ್ಧ ಆರೋಪಗಳನ್ನು ಮಾಡುವುದನ್ನು ಬಿಟ್ಟು ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಎಂದು ದೂರಿದರು.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಆಡಳಿತಕ್ಕೆ ಬಂದ ಬಳಿಕ 5 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಉಭಯ ಪಾರ್ಟಿಗಳ ಪ್ರಮುಖರು ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಮುಂಬರುವ 8 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಈಗ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಪೂರ್ವ ಪರೀಕ್ಷೆಯಾಗಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ದಿ. ಕೆ.ಎಸ್. ಪುಟ್ಟಣ್ಣಯ್ಯ ನಿವಾಸಕ್ಕೆ ಜೆಡಿಎಸ್- ಕಾಂಗ್ರೆಸ್ ಪ್ರಮುಖರ ಭೇಟಿ