Select Your Language

Notifications

webdunia
webdunia
webdunia
webdunia

ಗಾಂಜಾ ಮತ್ತಿನಲ್ಲಿ ಮನಬಂದಂತೆ ಪತ್ನಿಯನ್ನು ಚುಚ್ಚಿದ ಪತಿ

ಗಾಂಜಾ ಮತ್ತಿನಲ್ಲಿ ಮನಬಂದಂತೆ ಪತ್ನಿಯನ್ನು ಚುಚ್ಚಿದ ಪತಿ
bangalore , ಭಾನುವಾರ, 16 ಅಕ್ಟೋಬರ್ 2022 (14:43 IST)
ಕಳೆದ ಕೆಲ ವರ್ಷಗಳ ಹಿಂದೆ ರಮೇಶ್ ಹಾಗೂ ಅರ್ಪಿತಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು .ಇವರಿಬ್ಬರು 6 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗು ಇದ್ದು ಇಬ್ಬರು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಜೀವನ ಸಾಗಿಸುತ್ತಿದ್ದರು ಆದರೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರ  ನಡುವಿನ ಜಗಳ ವಿಕೋಪಕ್ಕೆ ತಿರುಗಿ ಹೊಸಕೋಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಈ ನಡುವೆ ಇಬ್ಬರು ಒಪ್ಪಿ ಡಿವೈರ್ಸ್ ಗೆ ಅರ್ಜಿ ಸಲ್ಲಿಸಿ ದೂರವಾಗಲು ನಿರ್ಧರಿಸಿದ್ದು ಅದರಂತೆ ಬೇರೆ ಬೇರೆ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಪತ್ನಿ ಅರ್ಪಿತಾ ಮೇಲೆ ಅನುಮಾನ ಪಟ್ಟ ಪತಿ ರಮೇಶ್ ಇಬ್ಬರು ಒಟ್ಟಿಗೆ ಜೀವನ ನಡೆಸೋಣ ಎಂದು ಆಕೆಯ ಜೊತೆ ಮಾತನಾಡುತ್ತಿದ್ದ ರಮೇಶ್ ಇಂದು ಬೆಳಿಗ್ಗೆ ಆಕೆಯನ್ನು ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲ್ಲಗುಂಪೇ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಬಂದು ಮನಸೋಇಚ್ಛೆ ಸರಿಸುಮಾರು 15 ಭಾರಿ ಆಕೆಯನ್ನು ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿ ತಾನೂ ಸಹ ಸಾಯಲು ಪ್ರಯತ್ನಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಅವರಿಬ್ಬರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅದೃಷ್ಟವಾಷತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಪತ್ನಿ ಅರ್ಪಿತಾ ಸ್ಥಿತಿ ಗಂಭೀರವಾಗಿದ್ದು. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಕಳಿಸಿಕೊಂಡಿದ್ದಾರೆ.
 
ಒಟ್ಟಿನಲ್ಲಿ ಹಾಡಹಗಲೇ ಪತಿ ಪತ್ನಿ ಇಬ್ಬರೂ ಜನನಜಂಗುಳಿ ಇರುವ ಸ್ಥಳದಲ್ಲಿ ಚಾಕುವಿನಿಂದ ಚುಚ್ಚಿಕೊಂಡು ಕೊಲೆಗೆ ಯತ್ನಿಸಿರುವುದು ನೋಡುಗರಲ್ಲಿ ನಡುಕ ಹುಟ್ಟಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್ ನಲ್ಲಿ‌ ಒಗ್ಗಟ್ಟಿನ‌ ಮಂತ್ರ ಪಠಿಸಿದ ಖರ್ಗೆ