Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಪತಿ ಆತ್ಮಹತ್ಯೆ

ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಪತಿ ಆತ್ಮಹತ್ಯೆ
ಧಾರವಾಡ , ಗುರುವಾರ, 17 ಮಾರ್ಚ್ 2022 (09:16 IST)
ಧಾರವಾಡ :  ಪತ್ನಿಯನ್ನು ತನ್ನ ಜತೆಗೆ ಕಳುಹಿಸಲಿಲ್ಲ ಎಂದು ಮನನೊಂದು ಹೆಂಡತಿ ತವರೂರಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ತಾಲೂಕಿನ ಚಂದನಮಟ್ಟಿಯಲ್ಲಿ ನಡೆದಿದೆ.
 
ತಾಲೂಕಿನ ಮನಗುಂಡಿ ಗ್ರಾಮದ ಮಲ್ಲೇಶಪ್ಪ ಶಿವಪ್ಪ ಸುರಪುರ (40) ಆತ್ಮಹತ್ಯೆ ಮಾಡಿಕೊಂಡವರು. ತನ್ನ ಪತ್ನಿಯ ತವರೂರು ಚಂದನಮಟ್ಟಿಗೆ ಹೋಗಿದ್ದನು.

ತನ್ನ ಪತ್ನಿಯನ್ನು ಕಳಿಸಲಿಲ್ಲ ಎಂದು ಬೇಸತ್ತು ಅಲ್ಲಿಯೇ ವಿಷ ಸೇವಿಸಿದ್ದನು. ತೀವ್ರ ಅಸ್ವಸ್ಥವಾಗಿದ್ದ ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಜಿಹಾದ್ ಗೆ ಗೃಹಿಣಿಯೋರ್ವಳು ಬಲಿ?