Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲೊಂದು ಹೃದಯ ವಿದ್ರಾವಕ ಘಟನೆ

Webdunia
ಶುಕ್ರವಾರ, 4 ಆಗಸ್ಟ್ 2023 (16:06 IST)
ಮನುಷ್ಯನಿಗೆ ಸಾವು ಅದ್ಹೇಗೆ..ಅದ್ಯಾವ ಸನ್ನಿವೇಶದಲ್ಲಿ ಬರುತ್ತೆ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಕ್ಕೆ ಸಾಧ್ಯ ಇಲ್ಲ ಅನ್ನೋದಕ್ಕೆ ಮತ್ತೊಂದು ನಿದರ್ಶನ ಇದು.ಯಾಕಂದ್ರೆ ಊಟ ಮಾಡಲು ಅಂತಾ ಬಂದವರು ಸಾವಿನ ಮನೆ ಸೇರಿದ್ದಾರೆ..ಆಗಿದ್ದೇನಂದ್ರೆ ರಾತ್ರಿ‌ 10.30 ರ ಸಮಯ.ಶಿವಾಜಿನಗರ ಸಮೀದ ಸೆಂಟ್ರಲ್ ಸ್ಟ್ರೀಟ್ ರಸ್ತೆ.ರಸ್ತೆ ಬದಿಯಲ್ಲಿ ದಾಸ್ ಎಂಬಾತ ಎಗ್ ರೈಸ್ ನ ಗಾಡಿ ಇಟ್ಕೊಂಡಿದ್ದ.ಬಡವರು ಮತ್ತು ಮಧ್ಯಮ ವರ್ಗದ ಜನ ಇದೇ ಅಂಗಡಿಗೆ ಬಂದು ಊಟ ಮಾಡಿ ತೆರಳ್ತಿದ್ರು ಆದ್ರೆ ನಿನ್ನೆ ರಾತ್ರಿಯ ಸನ್ನಿವೇಶ ಮಾತ್ರ ಎಂದಿನಂತೆ ಇರಲಿಲ್ಲ.ಎಗ್ ರೈಸ್ ತಿನ್ನಲು ಬಂದವರನ್ನ ಕಟ್ಟಡದ ಗೋಡೆ ಹಾಗೂ ವಾಟರ್ ಟ್ಯಾಂಕ್ ಬಲಿ ಪಡೆದಿದೆ

ಎಗ್ ರೈಸ್ ಹಾಕ್ತಿದ್ದ ಅಂಗಡಿ ಪಕ್ಕದಲ್ಲೇ ಐದಂತಸ್ತಿನ ಕಟ್ಟಡವೊಂದಿದೆ‌.ಕಟ್ಟಡದ ಮೇಲಿನ ಸಣ್ಣ ಗೋಡೆ ಮೇಲೆ ಅವೈಜ್ಙಾನಿಕವಾಗಿ ಐನೂರು ಲೀಟರ್ ಸಾಮರ್ಥ್ಯದ ಎರಡು ವಾಟರ್ ಟ್ಯಾಂಕ್ ಅನ್ನ ಇರಿಸಲಾಗಿತ್ತು.ಹೆಚ್ಚಿನ ತೂಕ ಇದ್ದಿದ್ದರಿಂದ ಗೋಡೆ ಬಿರುಕುಗೊಂಡು ಕುಸಿದಿದೆ..ಈ ವೇಳೆ ವಾಟರ್ ಟ್ಯಾಂಕ್ ಕೂಡ ನೆಲ ಕಚ್ಚಿದೆ.ಗೋಡೆಗೆ ಅಳವಡಿಸಿದ್ದ ಹಾಲೋಬ್ಲಾಕ್ ಊಟ ಮಾಡ್ತಿದ್ದ ಅರುಳ್,ನಾಗೇಶ್ವರ್ ರಾವ್,ಕಮಲ್ ಥಾಪ ಎಂಬುವರ ಮೇಲೆ ಬಿದ್ದಿದ್ದೆ ಘಟನೆಯಲ್ಲಿ ತರಕಾರಿ ವ್ಯಾಪಾರಿ ಅರುಳ್ ಮತ್ತು ನಾಗೇಶ್ವರ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ..ಕಮಲ್ ಥಾಪ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಸದ್ಯ ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರ ವಿರುದ್ಧ 304 ಎ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ..ಅದೇನೇ ಹೇಳಿ ಊಟ ಮಾಡಲು ಅಂತಾ ಬಂದವರು ಸಾವಿನ ಮನೆ ಸೇರಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Cabinet reshuffle: ಸಿದ್ದರಾಮಯ್ಯ ಸಂಪುಟದಲ್ಲಿ ಇಷ್ಟು ಸಚಿವರಿಗೆ ಕೊಕ್, ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ

Indore Raja Raguvamshi Case: ಸೊಸೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಜ ರಘುವಂಶಿ ತಾಯಿ

Coastal Karnataka: ಕರಾವಳಿಯ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌

Modi: ಮೋದಿ ಎಲ್ಲಿ ಪ್ರಚಾರ ಸಿಗುತ್ತೋ ಅಲ್ಲಿ ಮಾತ್ರ ಹೋಗ್ತಾರಾ: ಪ್ರಲ್ಹಾದ್ ಜೋಶಿ ಏನು ಹೇಳಿದ್ರು

ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ, ಬಿಜೆಪಿ ಅಧಿಕಾರ ಹಿಡಿಯುತ್ತೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಮುಂದಿನ ಸುದ್ದಿ
Show comments