Select Your Language

Notifications

webdunia
webdunia
webdunia
webdunia

ದುಂದುವೆಚ್ಚಕ್ಕೆ ಮುಂದಾದ ಸರ್ಕಾರ

ದುಂದುವೆಚ್ಚಕ್ಕೆ ಮುಂದಾದ ಸರ್ಕಾರ
bangalore , ಸೋಮವಾರ, 31 ಜುಲೈ 2023 (18:34 IST)
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸದ್ಯ ಅನುದಾನ ಬಿಡುಗಡೆ ಮಾಡಲು ಹಣವಿಲ್ಲ ಎಂದಿದ್ದ ಸರ್ಕಾರ, ಇದೀಗ ದುಂದುವೆಚ್ಚಕ್ಕೆ ಮುಂದಾಗಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ರಾಜೀವ್ ಗಾಂಧಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ತಿದೆ. ಶೇಷಾದ್ರಿಪುರಂನ ಸ್ವಸ್ತಿಕ್ ಸರ್ಕಲ್ ಬಳಿ ರಾಜೀವ್‌ಗಾಂಧಿ ಪ್ರತಿಮೆ ನಿರ್ಮಿಸೋಕೆ ಬಿಬಿಎಂಪಿ ಟೆಂಡರ್ ಕರೆದಿದೆ. ಇನ್ನು ಪುತ್ಥಳಿ ಸ್ಥಾಪನೆಗೆ ಬರೋಬ್ಬರಿ  1ಕೋಟಿ 7ಲಕ್ಷ 80 ಸಾವಿರ ಮೀಸಲಿಟ್ಟಿದ್ದು ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ. ಸದ್ಯ ಸರ್ಕಾರದ ಈ ನಡೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದು, ಶಾಸಕರಿಗೆ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎಂದ ಸರ್ಕಾರ, ಇದೀಗ ಜನರ ತೆರಿಗೆ ಹಣವನ್ನ ವ್ಯರ್ಥ ಮಾಡ್ತಿದೆ ಅಂತಾ ಕಿಡಿಕಾರಿದ್ದಾರೆ. ಸರ್ಕಾರ ಅಭಿವೃದ್ದೀ ಕೆಲಸಗಳನ್ನ ಮಾಡೋದು ಬಿಟ್ಟು ಪುತ್ಥಳಿಗೆ ಕೋಟಿ ಕೋಟಿ ವೆಚ್ಚ ಮಾಡೋದು ಎಷ್ಟರಮಟ್ಟಿಗೆ ಸರಿ ಅಂತಾ ಕಿಡಿಕಾರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಗ್ರಾಹಕರ ಜೇಬು ಸುಡಲಿದೆ ಹಾಲಿನ ದರ