Publish Date: Thu, 13 Jan 2022 (10:12 IST)
Updated Date: Thu, 13 Jan 2022 (20:16 IST)
ರಾಮನಗರ : ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ರಾಜ್ಯದಲ್ಲಿ ಎಲ್ಲ ರೀತಿ ಪ್ರತಿಭಟನೆ, ಪಾದಯಾತ್ರೆಯನ್ನು ನಿಷೇಧಿಸಿ ಸರ್ಕಾರ ಆದೇಶ ಪ್ರಕಟಿಸಿದ್ದರಿಂದ ಇಂದು ರಾಮನಗರ ರಣಾಂಗಣವಾಗುವ ಸಾಧ್ಯತೆಯಿದೆ.
ಪಾದಯಾತ್ರೆ ತಡೆಯುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದು ರಾಮನಗರ ಜಿಲ್ಲೆಯಲ್ಲಿ ಹೆಚ್ಚುವರಿ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರಿನಿಂದ ಕೆಎಸ್ಆರ್ಪಿ, ಡಿಎಆರ್ ತುಕಡಿಯನ್ನು ಕರೆಸಲಾಗಿದೆ.
ಡಿಸಿ, ಎಸ್ಪಿ ಮೂಲಕ ಪಾದಯಾತ್ರೆ ನಡೆಸದಂತೆ ನೋಟಿಸ್ ನೀಡಲು ಪ್ಲಾನ್ ಮಾಡಿಕೊಂಡಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 50ಕ್ಕೂ ಹೆಚ್ಚು ನಾಯಕರನ್ನು ಬಂಧನ ಮಾಡುವ ಸಾಧ್ಯತೆಯಿದೆ.
ಮೊದಲ ಹಂತದ ನಾಯಕರ ಬಳಿಕ 2ನೇ ಹಂತದ ಮುಖಂಡರ ಬಂಧಿಸಲಾಗುತ್ತದೆ. ಉಳಿದವರನ್ನ ಚದುರಿಸಿ ಮೈಕ್ ಮೂಲಕ ಪಾದಯಾತ್ರೆ ನಿರ್ಬಂಧ ಘೋಷಣೆ ಮಾಡಲಾಗುತ್ತದೆ.