Webdunia - Bharat's app for daily news and videos

Install App

ಭೀಮಾ ತೀರ ಆಯ್ತು ಈಗ ಕೃಷ್ಣಾ ತೀರದಲ್ಲಿ ಹೆಚ್ಚಿದೆ ಭಯ

Webdunia
ಶುಕ್ರವಾರ, 6 ಸೆಪ್ಟಂಬರ್ 2019 (16:31 IST)
ಭೀಮಾ ತೀರದ ಜನರು ಭಯದಲ್ಲಿರುವ ಸಂದರ್ಭದಲ್ಲೇ ಕೃಷ್ಣಾ ತೀರದ ಜನರು ಭಯಭೀತರಾಗುತ್ತಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಗೆ ಚಿಕ್ಕೋಡಿ ಎಸಿ, ತಹಸಿಲ್ದಾರ್ ಭೇಟಿ ನೀಡಿದ್ರು. ನದಿ ತೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಎಸಿ ಮತ್ತು ತಹಸಿಲ್ದಾರ್, ಜನರ ಸಮಸ್ಯೆಗಳನ್ನು ಕೇಳಿದ್ರು.

ಎಸಿ ರವೀಂದ್ರ ಕರಲಿಂಗನವರ ಮತ್ತು ತಹಸಿಲ್ದಾರ್ ಸಂತೋಷ ಬಿರಾದಾರ್ ಭೇಟಿ ನೀಡಿದ್ದು, ಈಗಾಗಲೇ ಕೃಷ್ಣಾ ನದಿಗೆ 1 ಲಕ್ಷ 24 ಸಾವಿರ ಕ್ಯೂಸೇಕ್ ನೀರು ಹರಿದು ಬರುತ್ತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯೆತೆ ಇದೆ ಎಂದ್ರು.
ಮುಂಜಾಗೃತಾ ಕ್ರಮವಾಗಿ 3 ಎಸ್ ಡಿ ಆರ್ ಎಫ್, 3 ಎನ್ ಡಿ ಆರ್ ಎಫ್ ತುಕಡಿ ಬಂದಿವೆ. 165 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ನದಿ ತೀರದ ಗ್ರಾಮಗಳಲ್ಲಿ ಎಲ್ಲಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದ್ರು.

ನದಿ ಹಾಗೂ ನದಿ ತೀರಕ್ಕೆ ಜನರು ತೆರಳಬಾರದೆಂದು ಅವರು ಸೂಚನೆ ನೀಡಿದ್ರು.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments