ಕಳಪೆ ಗುಣಮಟ್ಟದ ನುಗ್ಗೆ ಗಿಡ ನೀಡಿದ ಇಲಾಖೆ ವಿರುದ್ಧ ಬೇಸತ್ತು ಮರಗಳ ನಾಶ ಮಾಡಿದ ರೈತ

Webdunia
ಬುಧವಾರ, 12 ಅಕ್ಟೋಬರ್ 2022 (17:01 IST)
ಒಂದು ಕಡೆ ಬೆಳೆದ ಬೆಳೆಯನ್ನು ಕಿತ್ತು ಬಿಸಾಕುತ್ತಿರುವ ರೈತ, ಮತ್ತೊಂದೆಡೆ ಟ್ರಾಕ್ಟರ್ ಮೂಲಕ ಬಂಗಾರದಂತಹ ಬೆಳೆಯನ್ನು ನಾಶ ಪಡಿಸುತ್ತಿರುವುದು. ಮತ್ತೊಂದೆಡೆ ಆಕ್ರೋಶದಿಂದ ಬೆಳೆದ ಮರಗಳನ್ನು ಕಟಾವು ಮಾಡುತ್ತಿರುವುದು. ಹೌದು ಈ ದೃಶ್ಯಗಳು ಕಂಡುಬಂದಿದ್ದು ಯಾವುದೋ ಸಿನಿಮಾದಲ್ಲಿ ಅಲ್ಲ ಬದಲಿಗೆ ಮನನೊಂದ ರೈತರು ತಮ್ಮ ಬೆಳೆಗಳನ್ನೆಲ್ಲಾ ನಾಶ ಪಡಿಸುತ್ತಿರುವುದು. ಹೌದು ರೈತರು ಬೆಳೆಗಳನ್ನು ಬೆಳೆದು ಅದರಿಂದ ಜೀವನ ಸಾಗಿಸುತ್ತಾ ನೆಮ್ಮದಿಯಿಂದ ಒಂದೊತ್ತು ಊಟ ಮಾಡುತ್ತಾರೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ವಾಗಟ ಗ್ರಾಮದಲ್ಲಿ ಈ ರೀತಿ ರೈತರು ತಾವು ಬೆಳೆದ ಬೆಳೆಗಳನ್ನೆಲ್ಲಾ ತಾವೇ ನಾಶ ಪಡಿಸಿ ರೈತರ ಬದುಕು ಯಾರಿಗೂ ಬೇಡ ಎಂಬಂತೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
 
ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ವಾಗಟ ಗ್ರಾಮದ ರೈತ ರಮೇಶ್ ಎಂಬುವವರು ಸಾಲ ಸೋಲ ಮಾಡಿ ಸುಮಾರು 50 ಸಾವಿರ ಖರ್ಚು ಮಾಡಿ ಸೊಪ್ಪು ಬೆಳೆಯನ್ನು ಬೆಳೆದು ದಿನನಿತ್ಯ ಔಷಧಿಗಳನ್ನು ಸಿಂಪಡಿಸಿ ಬೆಳೆಯನ್ನು ಪೋಷಣೆ ಮಾಡುತ್ತಿದ್ದರು ಆದರೆ ಬೆಳೆ ಬೆಳೆದು ಇನ್ನೇನು ಕೈ ಸೇರಿ ಕಷ್ಟ ತೀರಿತು ಎಂದು ಭಾವಿಸುವಷ್ಟರಲ್ಲಿ ಸರಿಯಾದ ಬೆಲೆ ಸಿಗದೆ ಕಂಗೆಟ್ಟ ರೈತ ರಮೇಶ್ ಹಾಕಿದ ಬಂಡವಾಳ ಅಲ್ಲಾ ಇಷ್ಟು ದಿನಗಳ ಕಾಲ ಬೆಳೆಯನ್ನು ಪೋಷಣೆ ಮಾಡಲು ಖರ್ಚು ಮಾಡಿದ್ದು ಸಹ ಸಿಗದಂತಾಗಿದೆ ಎಂದು ಮನನೊಂದು ಟ್ರಾಕ್ಟರ್ ಮೂಲಕ ಸಂಪೂರ್ಣ ಬೆಳೆಯನ್ನು ನಾಶ ಪಡಿಸಿದ್ದಾರೆ.
 
ಮತ್ತೊಂದೆಡೆ  ಗ್ರಾಮದ ರೈತ ಗೋವಿಂದರಾಜು ಎಂಬುವವರು ಕೋಲಾರದ ಕೃಷಿ ಇಲಾಖೆಯಲ್ಲಿ ಬಾಗಲಕೋಟೆ ಬಾದಾಮಿ 2 ಎಂಬ ಉತ್ತಮ ತಳಿ ಎಂದು ಹೇಳಿ ನುಗ್ಗೆ ಗಿಡ ತಂದು ಸುಮಾರು 1 ವರ್ಷಗಳ ಕಾಲ ಅವುಗಳನ್ನು ಸುಮಾರು 1 ಲಕ್ಷಕ್ಕೂ ಅಧಿಕ ಖರ್ಚು ಮಾಡಿ 1 ಎಕರೆ ಪ್ರದೇಶದಲ್ಲಿ ಬೆಳೆಸಿದ್ದಾರೆ ಆದರೆ ಕಾಲ ಕಳೆದಂತೆಲ್ಲಾ ಗಿಡ ಬೆಳೆದು ಮರವಾಗಿದೇ ವಿನಹ ಯಾವುದೇ ರೀತಿಯ ಪಸಲು ಮರದಲ್ಲಿ ಬಿಡದ ಕಾರಣ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರೈತ ಎತ್ತರಕ್ಕೆ ಬೆಳೆದಿದ್ದ ಸಂಪೂರ್ಣ ನುಗ್ಗೆ ಮರಗಳನ್ನು ಕತ್ತರಿಸಿ ಬಿಸಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
 
ಒಟ್ಟಿನಲ್ಲಿ ಒಂದಲ್ಲ ಒಂದು ರೀತಿಯಿಂದ ರೈತರ ಸಮಸ್ಯೆಗಳನ್ನು ಕೇಳುವವರು ಇಲ್ಲದೆ ಬೆಳೆದ ಬೆಳೆಯಿಂದ ಹೊಟ್ಟೆತುಂಬಿಸಿಕೊಳ್ಳಬೇಕಾದ ರೈತರೇ ತಾವು ಬೆಳೆದ ಬೆಳೆಯನ್ನು ತಮ್ಮ ಕೈಯಾರ ನಾಶ ಪಡಿಸಿ ರೈತರ ಕಷ್ಟ ಕೇಳುವವರು ಯಾರು ಅಧಿಕಾರಿಗಳೇ ಈ ರೀತಿಯಾಗಿ ರೈತರಿಗೆ ಮೋಸ ಮಾಡಿದರೆ ಹೇಗೆ ಎಂದು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸಹಾಯಕರಾದ ಮಲ್ಲಿಕಾರ್ಜುನ ಖರ್ಗೆ: ಇನ್ನು ರಾಹುಲ್ ಗಾಂಧಿಯೇ ಬರಬೇಕು

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ಮುಂದಿನ ಸುದ್ದಿ
Show comments