Select Your Language

Notifications

webdunia
webdunia
webdunia
webdunia

2018ರ ಚುನಾವಣೆ ಸೋಲಿನ ಭಯದಿಂದ ಬಿಜೆಪಿಯಿಂದ ಡಿನೋಟಿಫೈ ಆರೋಪ

2018ರ ಚುನಾವಣೆ ಸೋಲಿನ ಭಯದಿಂದ ಬಿಜೆಪಿಯಿಂದ ಡಿನೋಟಿಫೈ ಆರೋಪ
ಬೆಂಗಳೂರು , ಬುಧವಾರ, 11 ಅಕ್ಟೋಬರ್ 2017 (17:53 IST)
2018ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯವಾಗಿದ್ದರಿಂದ ನನ್ನ ವಿರುದ್ಧ ಡಿನೋಟಿಫೈ ಆರೋಪ ಮಾಡುತ್ತಿದೆ. ನನ್ನ ವಿರುದ್ಧ ಇದು ರಾಜಕೀಯ ಪ್ರೇರಿತ ಆರೋಪವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಅರ್ಜಿ ಸಲ್ಲಿಸಿದರೂ ಪರಿಶೀಲಿಸಿ ಎಂದು ಬರೆಯುತ್ತೇನೆ. ಪರಿಶೀಲಿಸಿ ಎಂದು ಬರೆದರೆ ಆದೇಶ ನೀಡಿದಂತೆಯೇ? ಪುಟ್ಟಸ್ವಾಮಿ ಸಚಿವರಾಗಿದ್ದವರು. ಅವರಿಗೆ ಅಷ್ಟು ಬುದ್ದಿ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ನನಗೆ ಡಿನೋಟಿಫೈ ಮಾಡುವ ಅಧಿಕಾರವಿದ್ದರೂ ನಾನೇ ಒಂದು ಇಂಚು ಭೂಮಿಯನ್ನು ಇಲ್ಲಿಯವರೆಗೆ ಡಿನೋಟಿಫೈ ಮಾಡಿಲ್ಲ.
ಡಿನೋಟಿಫಿಕೇಶನ್ ಮಾಡಲು ಕೆಲವು ನಿಯಮಾವಳಿಗಳಿದ್ದು ಅದಕ್ಕೊಂದು ಸಮಿತಿ ಇರುತ್ತದೆ ಎಂದು ತಿಳಿಸಿದ್ದಾರೆ.
 
ಶಾಂತಾ ಇಂಡಸ್ಟ್ರೀಸ್‌ಗೂ ನನ್ನ ಪುತ್ರ ಯತೀಂದ್ರನಿಗೂ ಯಾವುದೇ ಸಂಬಂಧವಿಲ್ಲ. ಮ್ಯಾಟ್ರಿಕ್ಸ್ ಸಲ್ಯೂಷನ್ಸ್ ಕಂಪೆನಿಯ ಮೇಲೆ ಆರೋಪ ಬಂದಾಗ ನನ್ನ ಮಗನಿಗೆ ರಾಜೀನಾಮೆ ನೀಡುವಂತೆ ನಾನೇ ಸೂಚಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ವಾಪಸ್