Select Your Language

Notifications

webdunia
webdunia
webdunia
webdunia

ಯುಗಾದಿ ಆಚರಣೆಗೆ ಈ ಜಿಲ್ಲೆಗೆ ಬರಲೇಬೇಡಿ ಎಂದ ಜಿಲ್ಲಾಧಿಕಾರಿ

ಯುಗಾದಿ ಆಚರಣೆಗೆ ಈ ಜಿಲ್ಲೆಗೆ ಬರಲೇಬೇಡಿ ಎಂದ ಜಿಲ್ಲಾಧಿಕಾರಿ
ಮಂಡ್ಯ , ಮಂಗಳವಾರ, 24 ಮಾರ್ಚ್ 2020 (17:08 IST)
ಈ ಜಿಲ್ಲೆಗೆ ಯುಗಾದಿ ಆಚರಣೆಗೆ ನೀವು ಬೇರೆ ಬೇರೆ ಊರುಗಳಿಂದ ಬರಲೇಬೇಡಿ. ಹೀಗಂತ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಯುಗಾದಿ ಹಬ್ಬಕ್ಕೆ ಆಗಮಿಸುವ ನಾಗರಿಕರಿಗೆ ಮಂಡ್ಯ ಜಿಲ್ಲಾಡಳಿತ ನಿಷೇಧ ವಿಧಿಸಿದೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ಕಾರಣ ನೀಡಿದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಹಾಲು, ಹಣ್ಣು ತರಕಾರಿ, ಮೆಡಿಕಲ್ ಸ್ಟೋರ್ ಗಳನ್ನು ತೆರೆಯಲು ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಜನರು ಓಡಾಟ ನಡೆಸಲು ಅಡ್ಡಿ ಇಲ್ಲ. ಗುಂಪು ಗೂಡಬಾರದು ಅಷ್ಟೇ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ-ಮಗ, ಚಿಕ್ಕಮ್ಮನಲ್ಲಿ ಕೊರೊನಾ ಕೇಸ್ ದೃಢ : ಬೆಚ್ಚಿಬಿತ್ತು ಈ ಜಿಲ್ಲೆ