Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರಕ್ಕೆ ಡೆಡ್‌ಲೈನ್

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರಕ್ಕೆ ಡೆಡ್‌ಲೈನ್
ಬೆಂಗಳೂರು , ಭಾನುವಾರ, 17 ಸೆಪ್ಟಂಬರ್ 2017 (12:56 IST)
ವಿಚಾರವಾದಿಗಳ ವೇದಿಕೆ ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಸರಕಾರಕ್ಕೆ ಗಡುವು ನೀಡಿದೆ.
ಮುಂಬರುವ ವಿಜಯದಶಮಿಯೊಳಗೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸಬೇಕು. ಒಂದು ವೇಳೆ, ಬಂಧಿಸದಿದ್ದಲ್ಲಿ ಸರಕಾರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. 
 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ವಿಶೇಷ ತನಿಖಾ ತಂಡ ಶೀಘ್ರದಲ್ಲಿ ಭೇಧಿಸಲಿ.ಹಂತಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
 
ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಹತ್ಯೆಯಾಗಿ ಎರಡು ವರ್ಷಗಳೇ ಕಳೆದಿವೆ. ಇನ್ನೂ ಹಂತಕರ ಪತ್ತೆಯಾಗಿಲ್ಲ. ಕಲಬುರಗಿ ಪ್ರಕರಣದಂತೆ ಗೌರಿ ಲಂಕೇಶ್ ಪ್ರಕರಣ ಕೂಡಾ ವಿಳಂಬವಾಗಬಾರದು. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಿ ಎಂದು ವಿಚಾರವಾದಿಗಳ ವೇದಿಕೆ ಸರಕಾರವನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಎಡವಟ್ಟು ಮಾಡಿದ ರಾಹುಲ್ ಗಾಂಧಿ