ಡ್ರಮ್ ನಲ್ಲಿತ್ತು ಶವ..ಪ್ರಕರಣ ಬೇಧಿಸಿದ ರೈಲ್ವೇ ಪೊಲೀಸರು..!

Webdunia
ಗುರುವಾರ, 16 ಮಾರ್ಚ್ 2023 (18:44 IST)
ಅದು ಎಂಟು ಜನರ ಗ್ಯಾಂಗ್.ಮಹಿಳೆಯನ್ನ ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡಿದ್ರು.ಕೈ ಕಾಲು ಮುರಿದು‌ಡ್ರಮ್ ನಲ್ಲಿ ಹಾಕಿದ್ರು.ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಮಹಿಳೆಯ ಶವ ಇದ್ದ ಪ್ರಕರಣವನ್ನು ರೈಲ್ವೇ ಪೊಲೀಸರು ಬೇಧಿಸಿದ್ದಾರೆ.ಡ್ರಮ್ ಮೇಲಿದ್ದ ಸ್ಟಿಕ್ಕರ ಆರೋಪಿಗಳ ಸುಳಿವು ಕೊಟ್ಟಿತ್ತು.ನಂತರ ಹೊರಬಿದ್ದಿದ್ದೇ ನೋಡಿ ಕೌಟುಂಬಿಕ ಕಲಹದ ಕಹಾನಿ.ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿದ್ದ ಡ್ರಮ್ ಒಂದು ಇಟ್ಟಲ್ಲಿಯೇ ಇತ್ತು.ಯಾರು ಅತ್ತ ಸುಳಿಯಲೇ ಇಲ್ಲ.ಆರ್ ಪಿ ಎಫ್ ಅವರಿಗೆ ಅನುಮಾನ ಮೂಡಿದ್ದು ಬಂದು ಪರಿಶೀಲಿಸಿದ್ದಾರೆ.ನೋಡ್ತಿದ್ದಂತೆ ಶಾಕ್ ಯಾಕಂದ್ರೆ ಅದೇ ಡ್ರಮ್ ಒಳಗೆ ಮಹಿಳೆಯೊಬ್ಬಳ ಮೃತದೇಹವಿತ್ತು.ಮುಖ ಕಪ್ಪಾಗಿತ್ತು.ಕೈ,ಕಾಲು ಮುರಿದು ಹಾಕಲಾಗಿತ್ತು.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ರೈಲ್ವೇ ಪೊಲೀಸರು ಮಹಿಳೆಯ ಗುರುತು ಪತ್ತೆಗೆ ಮುಂದಾಗಿದ್ದಾರೆ.ಸದ್ಯ ಮೃತ ಮಹಿಳೆ ತಮನ್ನಾ ಅನ್ನೋದು ಗೊತ್ತಾಗಿದ್ದು..ಆರೋಪಿಗಳನ್ನೂ ಪತ್ತೆ ಹಚ್ಚಿದ್ದಾರೆ.

ಹೀಗೆ ಮುಖಕ್ಕೆ ಮಾಸ್ಕ್ ಹಾಕ್ಕೊಂಡು ಬರ್ತಿದ್ದಾರಲ್ಲ ಈ ಮೂವರೇ ನೋಡಿ ಹಂತಕರು..ಹೆಸರು ಕಮಾಲ್ ,ತನ್ವೀರ್ ಮತ್ತು ಶಾಕೀಬ್.ಇವ್ರ ಜೊತೆಗೆ ಮತ್ತೆ ಐವರಾದ ನವಾಬ್,ಜಮಾಲ್,ಮಜರ್,ಅಸ್ಸಾಬ್,ಸಬೂಲ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದು ಪರಾರಿಯಾಗಿದ್ದಾರೆ.ಇವ್ರೆಲ್ಲಾ ಬಿಹಾರ ಮೂಲದವರು.ಬೆಂಗಳೂರಲ್ಲಿ ಬಂದು ಮಾರ್ಕೆಟ್ ನ ತರಕಾರಿ ಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದವರು.ಸದ್ಯ ಅವರ ಪತ್ತೆಗೂ ಬಲೆ ಬೀಸಲಾಗಿದೆ.ಹಾಗಾದ್ರೆ ಓರ್ವ ಮಹಿಳೆಯನ್ನ ಈ ಎಂಟು ಜನರ ತಂಡ ಕೊಲೆ ಮಾಡಿದ್ಯಾಕೆ..? ಮೃತದೇಹವನ್ನು ಡ್ರಮ್ ನಲ್ಲಿ ತಂದಿಟ್ಟಿದ್ಯಾಕೆ..?ಅದೇ ನೋಡಿ ಇಂಟರಸ್ಟಿಂಗ್.

ಪೊಲೀಸರ ತನಿಖೆ ವೇಳೆ ಕೌಟುಂಬಿಕ ಕಲಹಕ್ಕೆ ಮಹಿಳೆ ಕೊಲೆಯಾಗಗಿದೆ ಅನ್ನೋದು ಗೊತ್ತಾಗಿದೆ.ಆ ಕತೆಯನ್ನೇ ಹೇಳ್ತಿವಿ ಕೇಳಿ.ತಮನ್ನಾ 2022 ರ ಏಪ್ರಿಲ್ ನಲ್ಲಿ ಅಫ್ರೋಜ್ ಎಂಬಾತನನ್ನ ಮದುವೆ ಆಗಿದ್ಳು.ಅಫ್ರೋಜ್ ವಿಶೇಷ ಚೇತನನಾಗಿದ್ದರಿಂದ ಆತನ ಜೊತೆ ಡಿವೋರ್ಸ್ ಪಡೆದು ಇಂತಿಕಾಬ್ ಎಂಬಾತನ ಜೊತೆಗೆ ಮದುವೆಯಾಗಿದ್ಳು.ಇಂತಿಕಾಬ್ ಜೊತೆಗೆ ಬೆಂಗಳೂರಿಗೆ ಆಗಮಸಿದ್ದ ತಮನ್ನಾ ಜಿಗಣಿಯಲ್ಲಿ ವಾಸಮಾಡಿಕೊಂಡಿದ್ರು.ಈ ನಡುವೆ ತಮನ್ನಾ ಮೊದಲ ಪತಿ ಅಫ್ರೋಜ್ ಬೇರಾರು ಅಲ್ಲಾ ಇದೇ ಇಂತಿಕಾಬ್ ದೊಡ್ಡಪ್ಪನ ಮಗನೇ ಆಗಿದ್ದ.ಕೊಲೆಯ ಪ್ರಮುಖ ಆರೋಪಿ ನವಾಬ್ ತಮನ್ನಾ ಎರಡನೇ ಪತಿ ಇಂತಿಕಾಬ್ ಸಹೋದರನಾಗಿದ್ದ.ಅಫ್ರೋಜ್ ಡಿವೋರ್ಸ್ ನೀಡಿದ್ದರಿಂದ ಕುಪಿತನಾಗಿದ್ದ ನವಾಬ್ ನಮ್ಮ ಇಡೀ ಕುಟುಂಬವನ್ನೇ ಹಾಳು ಮಾಡ್ತಿದ್ದಾಳೆಂದು ಕೊಲೆಗೆ ಸ್ಕೆಚ್ ಹಾಕಿಕೊಂಡಿದ್ದ.

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೂತನ ರಾಜ್ಯ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಿದ ಥಾವರ್ ಚಂದ್ ಗೆಹ್ಲೋಟ್

ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ

ಪ್ರಚೋದನಕಾರಿ ಭಾಷಣ ಮಾಡಿದ ಕನ್ನೇರಿ ಕಾಡಸಿದ್ಧೇಶ್ವರ ಶ್ರೀಗಳಿಗೆ ಬಿಗ್‌ಶಾಕ್

ನಿಷೇಧ ಆರ್ ಎಸ್ಎಸ್ ಗೆ ಮಾತ್ರನಾ, ಬೇರೆ ಧರ್ಮಕ್ಕೂ ಇದೆಯಾ: ಪ್ರಿಯಾಂಕ್ ಖರ್ಗೆ ಹೇಳಿದ್ದೇನು

ಚಲಿಸುತ್ತಿದ್ದ ರೈಲ್ವಿನಲ್ಲಿ ಹೆರಿಗೆ ನೋವು, ಪ್ರಯಾಣಿಕನೊಬ್ಬನ ದೈರ್ಯಕ್ಕೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments