Select Your Language

Notifications

webdunia
webdunia
webdunia
webdunia

ಹೆಜ್ಜೇನು ದಾಳಿಯಿಂದ ಯುವಕನ ಸ್ಥಿತಿ ಗಂಭೀರ

ಜೇನು
ಕೃಷ್ಣರಾಜಪೇಟೆ , ಮಂಗಳವಾರ, 15 ಜನವರಿ 2019 (17:06 IST)
ಯುವಕನೊಬ್ಬ ಜಮೀನಿನ ಬಳಿ ಹೋದಾಗ ನಡೆದ ಹೆಜ್ಜೇನು ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೃಷ್ಣರಾಜಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಕೆ.ಜಿ. ಕೋಡಿಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕೆ.ಜಿ.ಕೋಡಿಹಳ್ಳಿಯ ಗೋಪಾಲ ಎಂಬುವರ ಪುತ್ರ ರವಿ ಹಾಗೂ ಸ್ನೇಹಿತರು ಇಂದು ಬೆಳಿಗ್ಗೆ ಜಮೀನಿನ ಬಳಿ ಹೋಗುತ್ತಿದ್ದರು. ಆಗ  ಹೆಜ್ಜೇನಿನ ಗುಂಪೊಂದು ದಾಳಿ ಮಾಡಿದೆ. ಜೇನುಗಳ ದಾಳಿಯಿಂದ ವಿಷವು ಮೈಗೆ ಏರಿ ಉರಿಯನ್ನು ತಾಳಲಾರದೆ ಅಸ್ವಸ್ಥಗೊಂಡ ಯುವಕ ರವಿ ಅವರಿಗೆ ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸತೀಶ್ ಜಾರಕಿಹೊಳಿಗೆ ಕೈ ಮುಖಂಡರ ಬುಲಾವ್