Webdunia - Bharat's app for daily news and videos

Install App

ಸಾಲಕ್ಕಾಗಿ ಮಹಿಳೆಯನ್ನ ಜೀತಕ್ಕೆ ಎಳದೊಯ್ದ ಪ್ರಕರಣ: ಆರೋಪಿಯನ್ನ ಬಿಡುವುದಿಲ್ಲ ಎಂದ ಆಯೋಗ

Webdunia
ಭಾನುವಾರ, 23 ಸೆಪ್ಟಂಬರ್ 2018 (16:59 IST)
ಮಾಡಿದ ಸಾಲಕ್ಕಾಗಿ ಮಹಿಳೆಯನ್ನ ಜೀತಕ್ಕೆ ಎಳದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸುದ್ದಿಗೋಷ್ಟಿನಡೆಸಿದರು. ಹಣ ವಾಪಸ್ ಕೊಡಲಿಲ್ಲ ಅಂತ ಬಲವಂತವಾಗಿ ಜೀತಕ್ಕೆ ಎಳೆದೊಯ್ದಿದ್ದು ಅಮಾನವೀಯ ಕೃತ್ಯವಾಗಿದೆ. ಅಮಾಯಕ ಮಹಿಳೆ ಮೇಲೆ ದೌರ್ಜನ್ಯ ನಡೆಯುವಾಗ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಆದರೆ ಅದನ್ನು ಬಿಟ್ಟು ಮಹಿಳೆಯನ್ನು ಕಾಪಾಡಲು ಮುಂದಾಗದಿರುವುದು ದುರಂತ ಎಂದರು.

ಆರೋಪಿಯನ್ನು ಮಹಿಳಾ ಆಯೋಗ ಬಿಡುವುದಿಲ್ಲ. ಉಗ್ರ ಶಿಕ್ಷೆ ಕೊಡಿಸುತ್ತದೆ ಎಂದ ಅವರು, ಆಧುನಿಕ ಸಮಾಜದಲ್ಲಿ ಪೈಶಾಚಿಕವಾಗಿ ನಡೆದಿರುವ ಜೀತ ಪದ್ದತಿ ಇದು. ಜೀತಕ್ಕಾಗಿ 50 ಸಾವಿರ ರೂ.‌ಅನ್ನು ಮುಂಗಡವಾಗಿ ಆರೋಪಿ ಕೊಟ್ಟಿದ್ದಾನೆ. ಬಲಿಷ್ಠರು, ಹಣವಂತರು ನಿರ್ಗತಿಕರ ಮೇಲೆ ನಡೆಸಿರುವ ಕೃತ್ಯ ಇದಾಗಿದೆ. ಆರೋಪಿ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments