Select Your Language

Notifications

webdunia
webdunia
webdunia
webdunia

ಕುಶಾಲನಗರದಲ್ಲಿ ಕಳೆಗಟ್ಟಿದ ಸಂಭ್ರಮ; ಕಾರಣ ಏನು?

ಕುಶಾಲನಗರದಲ್ಲಿ ಕಳೆಗಟ್ಟಿದ ಸಂಭ್ರಮ; ಕಾರಣ ಏನು?
ಕೊಡಗು , ಬುಧವಾರ, 27 ಫೆಬ್ರವರಿ 2019 (18:41 IST)
ಕುಶಾಲ ನಗರದ ಜನರು ಇಂದು ಅತೀವ ಸಂಭ್ರಮದಲ್ಲಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆ ಆಗಿದ್ದರಿಂದಾಗಿ ಫುಲ್ ಖುಷ್ ಆಗಿದ್ದಾರೆ.

ಸರ್ಕಾರ ಹೊಸ ತಾಲ್ಲೂಕು ಘೋಷಣೆ ಮಾಡಿರುವ ಬೆನ್ನಲ್ಲೇ ಕುಶಾಲನಗರದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ.
ಕಳೆದ ಹತ್ತು ವರ್ಷಗಳಿಂದ  ಕುಶಾಲನಗರವನ್ನ ಕಾವೇರಿ ತಾಲೂಕು ಮಾಡಬೇಕೆಂದು ಹೋರಾಟ ಮಾಡಲಾಗಿತ್ತು.
ಇದೀಗ ರಾಜ್ಯದಲ್ಲಿ ಮತ್ತೆ  ಹೊಸ 5 ತಾಲ್ಲೂಕು ಘೋಷಣೆ ಮಾಡಲಾಗಿದೆ. ಕುಶಾಲನಗರ ಕಾವೇರಿ ತಾಲ್ಲೂಕು ಘೋಷಣೆ ಮಾಡಿವ ಕ್ರಮವನ್ನ ಸ್ವಾಗತಿಸಿ  ಸಂಭ್ರಮ ಪಡಲಾಯಿತು.

ಕುಶಾಲನಗರ ಕಾವೇರಿ ತಾಲೂಕು ಹೋರಾಟಗಾರರಿಂದ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ ಶಶಿಧರ್ ನೇತೃತ್ವದಲ್ಲಿ  ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಪ್ರಧಾನಿಯಾಗಲೇ ಬೇಕು ಎಂದವರಾರು?