Webdunia - Bharat's app for daily news and videos

Install App

ಕಾರು ಕದ್ದು ಚುನಾವಣೆ ಸಾಲ ತೀರಿಸಿದ ಭೂಪ

Webdunia
ಸೋಮವಾರ, 16 ಮೇ 2022 (08:42 IST)
ಬೆಂಗಳೂರು: ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರೊಂದನ್ನು ಟೆಸ್ಟ್‌ ಡ್ರೈವ್‌ ನೆಪದಲ್ಲಿ ಮಾಲಿಕನಿಂದ ಪಡೆದು ಪರಾರಿಯಾಗಿದ್ದ ಖತರ್ನಾಕ್‌ ಕಳ್ಳ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
 
ಅಮೃತ ನಗರದ ನಿವಾಸಿ ಎಂ.ಜಿ.ವೆಂಕಟೇಶ್‌ ನಾಯ್ಕ (36) ಬಂಧಿತ. ಈತನಿಂದ ಕಾರು ಹಾಗೂ ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಕಳೆದ ಜ.30ರಂದು ಹೆಬ್ಬಾಳ ಕಾಫಿಬೋರ್ಡ್‌ ಲೇಔಟ್‌ ನಿವಾಸಿ ಎಂಜಿನಿಯರ್‌ ರವೀಂದ್ರ ಇಲೂರಿ ಅವರ ಬ್ರೀಜಾ ಕಾರನ್ನು ಖರೀದಿಸುವ ನೆಪದಲ್ಲಿ ಟೆಸ್ಟ್‌ ಡ್ರೈವ್‌ ಮಾಡುವುದಾಗಿ ಕಾರು ಪಡೆದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಬಾಗೇಪಲ್ಲಿ ಮೂಲದ ಆರೋಪಿ ವೆಂಕಟೇಶ್‌ ನಾಯ್ಕ ಊರಿನಲ್ಲಿ ಪತ್ನಿಯನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಸಾಲ ಮಾಡಿ ಚುನಾವಣೆಗೆ ಹಣ ಖರ್ಚು ಮಾಡಿದ್ದ. ಬಳಿಕ ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಬ್ರೀಜಾ ಕಾರನ್ನೇ ಮಾರಾಟ ಮಾಡಿ ಸಾಲ ತೀರಿಸಿದ್ದ. ಇನ್ನು ಕಾರು ಮಾರಾಟ ಮಾಡಿರುವ ಸುದ್ದಿ ಊರಿನವರಿಗೆ ತಿಳಿದರೆ ಅವಮಾನವಾಗಲಿದೆ ಎಂದು ಭಾವಿಸಿ, ಬೇರೊಂದು ಬ್ರೀಜಾ ಕಾರನ್ನೇ ಕದಿಯಲು ಸಂಚು ರೂಪಿಸಿದ್ದ. ಅದಕ್ಕಾಗಿ ಓಎಲ್‌ಎಕ್ಸ್‌ ಆ್ಯಪ್‌ನಲ್ಲಿ ಹುಡುಕಾಟ ನಡೆಸುತ್ತಿದ್ದ.
 
ಈ ವೇಳೆ ಎಂಜಿನಿಯರ್‌ ರವೀಂದ್ರ ಅವರು ತಮ್ಮ ಬ್ರೀಜಾ ಕಾರನ್ನು ಮಾರಾಟ ಮಾಡಲು ಓಎಲ್‌ಎಕ್ಸ್‌ನಲ್ಲಿ ಕಾರಿನ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ್ದ ಆರೋಪಿಯು  ರವೀಂದ್ರ ಅವರನ್ನು ಸಂಪರ್ಕಿಸಿ ಕಾರು ಖರೀದಿಸುವುದಾಗಿ ಹೇಳಿದ್ದ. ಬಳಿಕ ವಿಳಾಸ ಪಡೆದು ಅಂದು ರಾತ್ರಿ 7.30ಕ್ಕೆ ರವೀಂದ್ರ ಅವರ ಮನೆ ಬಳಿ ತೆರಳಿದ್ದ. ಈ ವೇಳೆ ಟೆಸ್ಟ್‌ ಡ್ರೈವ್‌ ಮಾಡುವುದಾಗಿ ರವೀಂದ್ರ ಅವರಿಂದ ಕಾರು ಪಡೆದು ಪರಾರಿಯಾಗಿದ್ದ. ಈ ಸಂಬಂಧ ರವೀಂದ್ರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಆರೋಪಿ ವೆಂಕಟೇಶ್‌, ಓಎಲ್‌ಎಕ್ಸ್‌ನಲ್ಲಿ ಬ್ರೀಜಾ ಕಾರು ನೋಡಿದ ಬಳಿಕ ಮಾಲಿಕನನ್ನು ಸಂಪರ್ಕಿಸಲು ತನ್ನ ಮೊಬೈಲ್‌ ಬಳಸಿರಲಿಲ್ಲ. ಏಕೆಂದರೆ, ಕಳವು ಬಳಿಕ ಮೊಬೈಲ್‌ ನಂಬರ್‌ ಮೂಲಕ ಪೊಲೀಸರಿಗೆ ಸಿಕ್ಕಿ ಬೀಳಬಹುದು ಎಂದು ಭಾವಿಸಿದ್ದ. ಹೀಗಾಗಿ ಬಾಗಲೂರಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್‌ ಕದ್ದಿದ್ದ ಆರೋಪಿ ಆ ನಂಬರ್‌ನಿಂದ ಕಾರು ಮಾಲಿಕ ರವೀಂದ್ರ ಅವರನ್ನು ಸಂಪರ್ಕಿಸಿ ಕಾರು ಪಡೆದು ಪರಾರಿಯಾಗಿದ್ದ. ದೂರಿನ ಮೇರೆಗೆ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ತನಿಖೆಗೆ ಇಳಿದ ಪೊಲೀಸರಿಗೆ ಈ ನಂಬರ್‌ ಇರುವ ಮೊಬೈಲ್‌ ಕಳುವಾಗಿರುವುದು ಗೊತ್ತಾಗಿದೆ.
 
ಓಎಲ್‌ಎಕ್ಸ್‌ ಕಂಪನಿ ಸಂಪರ್ಕಿಸಿ ಸುಮಾರು ಎರಡೂವರೆ ಸಾವಿರ ಓಎಲ್‌ಎಕ್ಸ್‌ ಐಪಿ ಅಡ್ರೆಸ್‌ ಜಾಲಾಡಿದ್ದರು. ಈ ಪೈಕಿ ಎರಡು ಐಪಿ ಅಡ್ರೆಸ್‌ಗಳ ಬಗ್ಗೆ ಅನುಮಾನ ಬಂದು ತಾಂತ್ರಿಕ ತನಿಖೆ ಮಾಡಿದಾಗ ಆರೋಪಿಯ ಜಾಡು ಸಿಕ್ಕಿತು. ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಆರೋಪಿಯು ಓಡಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ

ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್‌ ಆರೋಪಕ್ಕೆ ಭಾರತದ ಪ್ರತ್ಯುತ್ತರ

ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ

ಯುವತಿಯ ಶವ ಸೂಟ್‌ಕೇಸ್‌ನಲ್ಲಿ ತುಂಬಿ ರೈಲಿನಿಂದ ಎಸೆದ ಪಾಪಿಗಳು: ರೈಲ್ವೆ ಸೇತುವೆ ಬಳಿ ಪತ್ತೆ

ಜೈಲಿನಲ್ಲಿರುವ ಮಾಜಿ ಐಎಎಸ್‌ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ಗೆ ಸುಪ್ರೀಂನಿಂದ ಕೊನೆಗೂ ಬಿಗ್‌ ರಿಲೀಫ್‌

ಮುಂದಿನ ಸುದ್ದಿ
Show comments