Webdunia - Bharat's app for daily news and videos

Install App

ಕಾರ್ ಗಾಜು ಒಡೆದು ಲಕ್ಷ ಲಕ್ಷ ನಗದು ದರೋಡೆ

Webdunia
ಗುರುವಾರ, 16 ಮೇ 2019 (16:53 IST)
ಸ್ವಿಪ್ಟ್ ಕಾರಿನ ಗಾಜು ಒಡೆದು ಲಕ್ಷ ಲಕ್ಷ ನಗದು ದೋಚಿರುವ ಘಟನೆ ನಡೆದಿದೆ.

ಕಲಬುರ್ಗಿಯ ಸಿಟಿ ಬಸ್ ನಿಲ್ದಾಣ ಬಳಿ ನಡೆದ ಘಟನೆ ಇದಾಗಿದ್ದು, 3.85 ಲಕ್ಷ ರೂಪಾಯಿ ಕಳ್ಳರು ದೋಚಿದ್ದಾರೆ. 

ಶಹಬಾದ್ ತಾಲೂಕು ಗೋಳಾ (ಕೆ) ಗ್ರಾಮದ ಮಾಣಿಕ ಪಾಟೀಲ್ ಎಂಬುವರಿಗೆ ಸೇರಿದ ಹಣವನ್ನು ದೋಚಲಾಗಿದೆ.

ಕಾಂಟ್ರ್ಯಾಕ್ಟರ್ ಆಗಿರುವ ಮಾಣಿಕ ಪಾಟೀಲ್, ಬಳಕೆಗಾಗಿ ಕರ್ನಾಟಕ ಬ್ಯಾಂಕ್ ದಿಂದ ಹಣ ಡ್ರಾ ಮಾಡಿದ್ದರು.
ಬ್ಯಾಂಕಿನಿಂದಲೇ ಸಂಚು ರೂಪಿಸಿದ ಇಬ್ಬರು ಖದೀಮ ಕಳ್ಳರು ಕೈ ಚಳಕ ತೋರಿದ್ದಾರೆ.

ಕಾರ್ ನಲ್ಲಿ ಹಣವಿಟ್ಟು 15 ನಿಮಿಷ ಖಾಸಗಿ ಕೆಲಸ ಮುಗಿಸಿ ಬರುವಷ್ಟರಲ್ಲಿ ಕೈಚಳಕ ತೋರಿರುವ ಖದೀಮರು ಪರಾರಿಯಾಗಿದ್ದಾರೆ. ಕಳ್ಳರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬ್ಯಾಂಕ್ ನಲ್ಲಿ ಮಾಣಿಕ್ ಪಾಟೀಲ್ ಹಣ ಡ್ರಾ ಮಾಡುವುದನ್ನು ಗಮನಿಸಿದ್ದಾರೆ ಕಳ್ಳರು. ಕಾರ್ ಪಾರ್ಕ್ ಮಾಡಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರಿಂದ ದೃಷ್ಕೃತ್ಯ ನಡೆದಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರಿಗಾಗಿ ಜಾಲ ಬೀಸಿದ್ದಾರೆ ಪೊಲೀಸರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments