Webdunia - Bharat's app for daily news and videos

Install App

ಬಿಜೆಪಿ ಇಬ್ಭಾಗ?: 3 ಡಿಸಿಎಂಗಳ ಬಗ್ಗೆ ಶುರುವಾಯ್ತು ಅಪಸ್ವರ

Webdunia
ಮಂಗಳವಾರ, 27 ಆಗಸ್ಟ್ 2019 (15:20 IST)
ಅಳೆದೂ ತೂಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ವಾರದ ಬಳಿಕ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿದೆ ಬಿಜೆಪಿ. ಈ ನಡುವೆ 3 ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿರೋದಕ್ಕೆ ಬಿಜೆಪಿ ಮುಖಂಡರೇ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.

ರಾಜ್ಯದ ರಾಜಕೀಯ ಹಾಗೂ ಇಂದಿನ ಸ್ಥಿತಿ ಮತ್ತು ಪರಿಸ್ಥಿತಿಯಲ್ಲಿ ಸರಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಅಗತ್ಯವೇ ಇರಲಿಲ್ಲ. ಹೀಗಂತ ಬಿಜೆಪಿ ಸಂಸದ ದೂರಿದ್ದಾರೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬರೋದಿಕ್ಕೆ ಅತೃಪ್ತ ಶಾಸಕರು ಕಾರಣರಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಮೊದಲು ಚಿಂತನೆ ಮಾಡಬೇಕಿದೆ. ಆದರೆ ಅದನ್ನು ಬಿಟ್ಟು, ಖಾತೆ ಹಂಚಿಕೆ, ಅಪಸ್ವರ, ಡಿಸಿಎಂ ಹುದ್ದೆ ಸೃಷ್ಟಿ ಮಾಡಿಕೊಂಡಿರೋದು ಸರಿಯಲ್ಲ.

ಬಿಜೆಪಿ ಹೈಕಮಾಂಡ್ ಡಿಸಿಎಂ ಹುದ್ದೆ ರಚನೆ ಮಾಡೋಕೆ ಮುಂದಾಗಿದ್ರೆ ಅವರಿಗೆ ರಾಜ್ಯದ ಮುಖಂಡರು ಕಚ್ಚಾಟ ಬಿಟ್ಟು ಮನವರಿಕೆ ಮಾಡಕೊಡಬಹುದಿತ್ತು ಅಂತ ವಾಗ್ದಾಳಿಯನ್ನು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಡೆಸಿದ್ದಾರೆ.   


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments