Webdunia - Bharat's app for daily news and videos

Install App

ರಮ್ಯಾಗೆ ಬಾಗಿನ ರವಾನಿಸಿ ಟಾಂಗ್ ನೀಡಿದ ಬಿಜೆಪಿ

Webdunia
ಬುಧವಾರ, 12 ಸೆಪ್ಟಂಬರ್ 2018 (14:07 IST)
ಮಂಡ್ಯ ಜಿಲ್ಲೆಗೆ ಆಗಮಿಸದ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಟಾಂಗ್ ನೀಡಿದ್ದಾರೆ.

ಬಿಜೆಪಿ ಕಾರ್ಯಕರ್ತರಿಂದ ತವರು ಮರೆತ ತಂಗಿಗೆ ಬಾಗಿನ ರವಾನೆ ಮಾಡಲಾಗಿದೆ. ಹೂ, ಬಳೆ ಹಾಗೂ ತೆಂಗಿನ ಕಾಯಿ ಒಳಗೊಂಡ ಬಾಗಿನ ರವಾನೆ ಮಾಡಲಾಗಿದೆ. ಮಾಜಿ ಸಂಸದೆ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ನೆ ಬಾಗಿನವನ್ನು ಪೋಸ್ಟ್ ಆಫೀಸ್ ನಲ್ಲಿ ಪಾರ್ಸಲ್ ಕಳಿಸುವ ಮೂಲಕ ವ್ಯಂಗ್ಯ ಮಾಡಲಾಗಿದೆ.

ಸಹೋದರಿ ರಮ್ಯಾ ತವರು ಮರೆತಿದ್ದು, ಅವರಿಗೆ ತವರು ಮಂಡ್ಯ ನೆನಪಾಗಲಿ ಅಂತಾ ಬಾಗಿನ ರವಾನೆ ಮಾಡಲಾಗಿದೆ.
ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಸಹೋದರಿಗೆ ಪ್ರೀತಿಯ ತವರಿನ ಉಡುಗೊರೆ ಇದು ಎಂದು ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ. ಕಳೆದ ವಿಧಾನ ಸಭೆ ಹಾಗೂ ನಗರಸಭೆ ಚುನಾವಣೆಗೂ ಮತ ಚಲಾಯಿಸದ ರಮ್ಯಾ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ.

ಗೌರಿ ಗಣೇಶನ ಹಬ್ಬಕ್ಕಾದರೂ ಮಂಡ್ಯಕ್ಕೆ ಆಗಮಿಸಿ ಎಂದು  ಬಿಜೆಪಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.
ಇನ್ನಾದ್ರೂ ತವರಿಗೆ ಆಗಮಿಸಿ ತವರಿನ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕಳೆದ ಎರಡು ವರ್ಷದಿಂದ ಮಂಡ್ಯದಿಂದ ಕಣ್ಮರೆಯಾಗಿರೋ ರಮ್ಯಾ ಈಗಲಾದ್ರೂ ಮಂಡ್ಯಕ್ಕೆ ಆಗಮಿಸದಿದ್ರೆ ಮುಂದಿನ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ರೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾಲಿವುಡ್ ಸಿನಿಮಾವಲ್ಲ ಇದು ರಿಯಲ್…ನೇಪಾಳದಲ್ಲಿ ಇದ್ದಕ್ಕಿದ್ದಂತೆ ರಾಕ್ಷಸನಂತೆ ನುಗ್ಗಿಬಂದ ಅಲೆಗಳು Shocking video

ದೆಹಲಿ ತಲುಪಿದ ಸಚಿವ ಬಿ ನಾಗೇಂದ್ರ, ಮುಂದಿನ ನಡೆ ನಿಗೂಢ

ದಿಡೀರ್ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಈ ಭೇಟಿಯ ಹಿಂದಿದೆ ಮಹತ್ವದ ಕಾರಣ

ಪಾರ್ಸೆಲ್ ತಂದಿದ್ದು ಲೇಟ್ ಆಯ್ತು ಎಂದು ಹಲ್ಲೆ ಮಾಡಿದ ಮಹಿಳೆ: ನೋಡುವಷ್ಟು ನೋಡಿದ ಡೆಲಿವರಿ ಬಾಯ್ ಕೊನೆಗೆ ಮಾಡಿದ್ದೇನು Video

Video: ಗಂಡನನ್ನೇ ಉಸಿರುಗಟ್ಟಿಸಿ ಕೊಂದ ಹೆಂಡತಿ: ಶಾಕಿಂಗ್ ಘಟನೆಯ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments