Select Your Language

Notifications

webdunia
webdunia
webdunia
webdunia

ಸುಂಟರಗಾಳಿಗೆ ಬೆಚ್ಚಿ ಬಿದ್ರು ಆ ಊರಿನ ಜನ್ರು

ಸುಂಟರಗಾಳಿಗೆ ಬೆಚ್ಚಿ ಬಿದ್ರು ಆ ಊರಿನ ಜನ್ರು
ವಿಜಯಪುರ , ಬುಧವಾರ, 20 ಮಾರ್ಚ್ 2019 (18:37 IST)
ಏಕಾಏಕಿಯಾಗಿ ಕಾಣಿಸಿಕೊಂಡ ಭಾರಿ ಪ್ರಮಾಣದ ಸುಂಟರಗಾಳಿಗೆ ಆ ಊರಿನ ಜನರು ಬೆಚ್ಚಿ ಬಿದ್ದ ಘಟನೆ ನಡೆದಿದೆ.

ಸುಂಟರಗಾಳಿಗೆ ಬೆಚ್ಚಿ ಬಿದ್ದಿದ್ದಾರೆ  ಗುಮ್ಮಟ ನಗರದ ಜನತೆ. ಬಿರುಗಾಳಿಗೆ ಅಂಗಡಿಯ ತಗಡು, ಟೇಬಲ್, ಖರ್ಚಿ ಹಾರಿ ಹೋದ ಘಟನೆ ನಡೆದಿದೆ.

ವಿಜಯಪುರ ನಗರದ ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ಹಿಂಭಾಗದಲ್ಲಿ ಘಟನೆ ನಡೆದಿದೆ. ಸುಂಟರ ಗಾಳಿ ಬೀಸಿದ ವೇಗಕ್ಕೆ ಹಾರಿ ಹೋದ ಹೊಟೇಲ್, ತಗಡು, ಶೀಟಿನಿಂದ ಜನರಿಗೆ ಅಪಾರ ನಷ್ಟ ಉಂಟಾಗಿದೆ.

ಹೋಟೆಲ್ ನ ಮಾಲೀಕ ಹಾಗೂ ಗ್ರಾಹಕರು ಗಾಳಿಯ ರಭಸ ನೋಡಿ ಓಡಿ ಪರಾರಿಯಾದರು. ಸ್ಥಳೀಯ ವಿದ್ಯಾರ್ಥಿಗಳು ಸುಂಟರ ಗಾಳಿ ಆರ್ಭಟದ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷ ಕಟ್ಟಿದವರೇ ಇಲ್ಲಿ ಎದುರಾಳಿಗಳು