Select Your Language

Notifications

webdunia
webdunia
webdunia
webdunia

ಚನ್ನಪಟ್ಟಣ ಅಭ್ಯರ್ಥಿ ವಿಚಾರದಲ್ಲಿ ಡಿಕೆಶಿ ಸಹೋದರರ ನಡುವೆ ಕದನ

ಚನ್ನಪಟ್ಟಣ ಅಭ್ಯರ್ಥಿ ವಿಚಾರದಲ್ಲಿ ಡಿಕೆಶಿ ಸಹೋದರರ ನಡುವೆ ಕದನ
ಬೆಂಗಳೂರು , ಬುಧವಾರ, 3 ಜನವರಿ 2018 (20:54 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಂಬಂಧಿಯನ್ನು ಅಭ್ಯರ್ಥಿಯಾಗಿಸುವ ವಿಚಾರದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ನಡುವೆ ಜಟಾಪಟಿ ನಡೆಯಲು ಕಾರಣವಾಗಿದೆ.
 
ಸಹೋದರಿಯ ಪತಿ ಶರಶ್ಚಂದ್ರ ಅವರನ್ನು ಚನ್ನಪಟ್ಟಣದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಡಿ.ಕೆ.ಸುರೇಶ್‌ ಮುಂದಾಗಿದ್ದು, ಇದೇ ವಿಚಾರ ಸಹೋದರರಿಬ್ಬರ ನಡುವೆ ಕದನ ಆರಂಭವಾಗಿದೆ.
 
ಸಂಬಂಧಿಯನ್ನು ರಾಜಕಾರಣಕ್ಕೆ ತರುವ ಆಸಕ್ತಿ ಡಿ.ಕೆ.ಶಿವಕುಮಾರ ಅವರಿಗೆ ಇಲ್ಲವಾಗಿದ್ದು, ಡಿ.ಕೆ.ಸುರೇಶ ಅವರ ಪ್ರಯತ್ನಕ್ಕೆ ಅಡ್ಡಿಯಾಗಿದೆ. ಆದರೆ, ಡಿ.ಕೆ.ಸುರೇಶ ಅವರು ಶರಶ್ಚಂದ್ರ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಬೇಕು ಎಂದು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ತಲಾಕ್ ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆ