Select Your Language

Notifications

webdunia
webdunia
webdunia
webdunia

ಬೆಂಕಿಯಿಟ್ಟು ಮೋಜು ನೋಡಿದ ಕಿಡಿಗೇಡಿಗಳು

ಬೆಂಕಿಯಿಟ್ಟು ಮೋಜು ನೋಡಿದ ಕಿಡಿಗೇಡಿಗಳು
ಹುಬ್ಬಳ್ಳಿ , ಶುಕ್ರವಾರ, 1 ನವೆಂಬರ್ 2019 (17:15 IST)
ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತ ಆನಂದ ಮೆರೆದಿದ್ದಾರೆ.

ಧಾರವಾಡದ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಈರಣ್ಣ ಹಳ್ಯಾಳ ಎಂಬುವರ ಒಡೆತನದ (ಲಾವಣಿ ಹೊಲ) 11 ಎಕರೆ ಶೇಂಗಾ ಬಣವಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸಂಪೂರ್ಣ ಹೊಲದಲ್ಲಿನ ಶೇಂಗಾ ಫಸಲು ಸುಟ್ಟು ಬೂದಿಯಾಗಿದೆ. 

ರಾತ್ರಿ 8. 30 ಕ್ಕೆ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದು, ಯಾವ ಕಾರಣಕ್ಕಾಗಿ ಈ ಕೃತ್ಯ ಎಸೆದಿದ್ದಾರೆ ಮತ್ತು ಯಾರು ಬೆಂಕಿ ಹಚ್ಚಿದ್ದಾರೆ ಎಂಬುದು ಗೊತ್ತಾಗಿಲ್ಲ. ಶೇಂಗಾ ಬೆಳೆ ಸರಿ ಸುಮಾರು 3 ಲಕ್ಷ ರೂಪಾಯಿವರೆಗೆ ಬೆಳೆಬಾಳುತಿತ್ತು, ರೈತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.   

ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ರೈತನ ಕುಟುಂಬದವರು ಒತ್ತಾಯ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಮಹಾರಾಷ್ಟ್ರ, ವಿಜಯವಾಡಕ್ಕೆ ತನಿಖಾ ತಂಡ