Select Your Language

Notifications

webdunia
webdunia
webdunia
webdunia

ಪ್ರವಾಹದ ಹಿನ್ನಲೆ; ಬೆಳಗಾವಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರವಾಹದ ಹಿನ್ನಲೆ; ಬೆಳಗಾವಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
ಬೆಳಗಾವಿ , ಭಾನುವಾರ, 11 ಆಗಸ್ಟ್ 2019 (11:58 IST)
ಬೆಳಗಾವಿ : ಬಾರೀ ಮಳೆಗೆ ಇಡೀ ಕರ್ನಾಟಕ ರಾಜ್ಯದ ಜನತೆ ತತ್ತಿರಿ ಹೋಗಿದ್ದು, ಈ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು  ವೀಕ್ಷಿಸಲು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಲಿದ್ದಾರೆ.



ಇಂದು ಮಧ್ಯಾಹ್ನದ ವೇಳೆಗೆ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇವರ ಜೊತೆ ಸಿಎಂ ಯಡಿಯೂರಪ್ಪ ಅವರು ಕೂಡ ವೀಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.

 

ಬೆಳಗಾವಿಯಲ್ಲಿ  ಮಹಾಮಳೆಗೆ ಇಡೀ ಜಿಲ್ಲೆಯೇ ಜಲಾವೃತಗೊಂಡಿದ್ದು, ಅನೇಕ ಮನೆ, ಆಸ್ತಿಪಾಸ್ತಿ ಹಾಳಾಗಿದೆ. ಮಾತ್ರವಲ್ಲ  ಅನೇಕ ಸಾವು ನೋವು ಕೂಡ ಸಂಭವಿಸಿದೆ. ಜನ ಜಾನುವಾರಗಳು ಪ್ರವಾಹದ ಪರಿಸ್ಥಿತಿಗೆ ಸಿಲುಕಿ ತತ್ತರಿಹೋಗಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇಕೆ? ಕಾರಣ ಬಯಲು