Webdunia - Bharat's app for daily news and videos

Install App

ಮೈಸೂರು ರಾಜಮನೆತನಕ್ಕೆ ಹೊಸ ಕಂದಮ್ಮನ ಆಗಮನ

Webdunia
ಗುರುವಾರ, 7 ಡಿಸೆಂಬರ್ 2017 (05:55 IST)
ಮೈಸೂರು: ಐವತ್ತೈದು ವರ್ಷಗಳ ನಂತರ ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ.ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ aವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ನಿನ್ನೇ ರಾತ್ರಿ 9.50 ಕ್ಕೆ  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು.


ನಿನ್ನೆ ಬೆಳಿಗ್ಗೆ ತ್ರಿಷಿಕಾ ಕುಮಾರಿ ಒಡೆಯರ್ ಆಸ್ಪತ್ರೆಗೆ ದಾಖಲಾಗಿದ್ದು, ರಾತ್ರಿ ಸರಿಸುಮಾರು 9.50 ಕ್ಕೆ ಹೆರಿಗೆಯಾಗಿದೆ.  ಪುತ್ರನ ಆಗಮನದಿಂದ ಮೈಸೂರು ರಾಜಮನೆತನದಲ್ಲಿ ಸಂತಸ ಮನೆ ಮಾಡಿದೆ. ರಾಜಮಾತೆ ಪ್ರಮೋದದೇವಿಯವರು ಹೆರಿಗೆಯ ಸಮಯದಲ್ಲಿ ಸೊಸೆಯ ಜೊತೆಗಿದ್ದರು. ಪುತ್ರನನ್ನು ಮುದ್ದಿಸಿ ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಖುಷಿಪಟ್ಟರು.


ಐವತ್ತೈದು ವರ್ಷಗಳ ನಂತರ ಮೈಸೂರು ಯದುವಂಶದ ಅರಮನೆಗೆ ಕಂದಮ್ಮನ ಆಗಮನವಾಗಿದೆ. 1962ರಲ್ಲಿ ರಾಣಿ ವಿಶಾಲಾಕ್ಷೀದೇವಿಯವರ ಜನನವಾಗಿತ್ತು. ಇವರು ಜಯಚಾಮರಾಜ ಒಡೆಯರ್ ಹಾಗು ಅಮ್ಮಣ್ಣಿಗೆ ಜನಿಸಿದ ಕೊನೆಯ ಮಗುವಾಗಿದ್ದರು. ಆ ನಂತರ ಯದುವಂಶದಲ್ಲಿ ಯಾವುದೆ ಮಗು ಜನಿಸಿರಲಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ