Webdunia - Bharat's app for daily news and videos

Install App

ಉಗ್ರರಿಗೆ ತಕ್ಕಶಾಸ್ತಿ ಮಾಡಿ ಎಂದ ಪೇಜಾವರ ಶ್ರೀ

Webdunia
ಭಾನುವಾರ, 17 ಫೆಬ್ರವರಿ 2019 (12:16 IST)
ಜಮ್ಮು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿಗೆ ಒಳಗಾಗಿ ಹುತಾತ್ಮರಾದ 44 ಯೋಧರಿಗೆ ಪೇಜಾವರ ಮಠದ ಹಿರಿಯ ಸ್ವಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ ನಮನ ಸಲ್ಲಿಸಿದ್ದಾರೆ. ವೀರಮರಣ ಹೊಂದಿದ ಯೋಧರಿಗೆ ಚಿರಶಾಂತಿ ಕೋರಿದ್ದಾರೆ.

ಉಗ್ರರ ಕೃತ್ಯದಿಂದ ಇಂದು ಇಡೀ ದೇಶವೇ ದುಃಖದಲ್ಲಿದೆ. ವೀರ ಮರಣ ಹೊಂದಿದ ಅವರ ಆತ್ಮಗಳಿಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದರು. ಮಹಾಭಾರತದಲ್ಲಿ ದೇಶಕ್ಕಾಗಿ ಹೋರಾಟ ಮಾಡುವ ಸೈನಿಕ ಯೋಗಿಯಷ್ಟೇ ಸಮಾನ. ಯೋಗಿ ಹೇಗೆ ಸದ್ಗತಿ ಹೊಂದಿ ಮುಕ್ತಿ ಹೊಂದುತ್ತಾನೋ ಅದೇ ರೀತಿ, ಯೋಧರಿಗೂ ಸದ್ಗತಿ ಭಗವಂತ ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.

ಕೇಂದ್ರ ಸರಕಾರ ಭಯೋತ್ಪಾದಕರಿಗೆ ಮರೆಯದ ಪಾಠ ಕಲಿಸಲಿ, ಆದರೆ ಯುದ್ದವಾಗುವ ರೀತಿ ಇರಬಾರದು. ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಸರ್ಜಿಕಲ್ ಸ್ಟೈಕ್ ರೀತಿಯ ಒಂದು ಪ್ರಯೋಗವಾಗಿರಬಹುದು ಅಥವಾ ಭಯೋತ್ಪಾದಕರಿಗೆ ಒಂದು ಸಣ್ಣ ಶಾಕ್ ಕೊಡುವಂತಿರಬೇಕು. ಆದರೆ ಯುದ್ದಕ್ಕೆ ಆಹ್ವಾನ ಕೊಡುವಂತಿರಬಾರದು ಎಂದು ಶ್ರೀಗಳು ಉಗ್ರರ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments