Webdunia - Bharat's app for daily news and videos

Install App

ಹಣ್ಣು ನೀಡಿದ ಯುವಕನಿಗೆ ಆನೆ ಮಾಡಿದ್ದೇನು? ಶಾಕಿಂಗ್!

Webdunia
ಭಾನುವಾರ, 17 ಫೆಬ್ರವರಿ 2019 (12:07 IST)
ಆ ಯುವಕ ಆನೆಗೆ ಬಾಳೆಹಣ್ಣನ್ನು ನೀಡಿದೆ. ಆದರೆ ಹಣ್ಣು ತಿನ್ನಬೇಕಿದ್ದ ಆನೆ ಆ ಯುವಕನ ತಲೆಗೆ ಬಾಯಿ ಹಾಕಿ ಬಿಸಾಡಿದೆ.

ಪ್ರಭಾಸ್ ಸರ್ಕಸ್ಕಂಪನಿ ಸಾಕಿರುವ ಮದವೇರಿದ್ದ ಆನೆಗೆ ತಿನ್ನಲು ಬಾಳೆಹಣ್ಣು ನೀಡಿದ ಯುವಕನ ತಲೆಯನ್ನೆ ಜಗಿದು ಸೊಂಡಿಲಿನಿಂದ ಎಸೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ತುಮಕೂರು ತಾಲ್ಲೂಕಿನ ಕೋರಾ ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದೆ.

ಪ್ರತಾಪ್ (20) ಎಂಬಾತನೇ ತೀವ್ರವಾಗಿ ಗಾಯಗೊಂಡಿರುವ ಯುವಕ. ಕೋರಾ ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರಭಾಸ್ ಸರ್ಕಸ್ನವರು ಸಾಕಿದ್ದ ಆನೆಗೆ ಮದವೇರಿದ್ದು ಆನೆಗೆ ಯುವಕ ಪ್ರತಾಪ್ ತಿನ್ನಲು ಬಾಳೆಹಣ್ಣು ನೀಡಿದ್ದಾನೆ.

ಮದ ತುಂಬಿದ್ದ ಸಾಕಾನೆ ಸೊಂಡಿಲಿನಿಂದ ಬಾಳೆಹಣ್ಣಿನೊಂದಿಗೆ ಯುವಕನ ತಲೆಗೂ ಬಾಯಿ ಹಾಕಿ ಜಗಿದಿದೆ. ನಂತರ ಸೊಂಡಿಲಿನಿಂದ ಯುವಕನನ್ನು ದೂರಕ್ಕೆ ಎಸೆದಿದೆ. ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments