Webdunia - Bharat's app for daily news and videos

Install App

ಹುಡುಗಿ ಮೇಲಿನ ಆಸೆಗೆ ಪ್ರಾಣ ಕಳೆದುಕೊಂಡ 70 ವರ್ಷದ ವೃದ್ದ

Webdunia
ಸೋಮವಾರ, 27 ಜನವರಿ 2020 (06:30 IST)
ಚಿತ್ರದುರ್ಗ : ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಪೀಡಿಸುತ್ತಿದ್ದ 70 ವರ್ಷದ ವೃದ್ದನನ್ನು  ಬ್ರೋಕರ್ ಗಳು ಕೊಲೆ ಮಾಡಿದ ಘಟನೆ ಚಿತ್ರದುರ್ಗದ ಭೀಮ ಸಮುದ್ರ ಗ್ರಾಮದಲ್ಲಿ ನಡೆದಿದೆ.

ತಿಮ್ಮಣ್ಣ(70) ಹುಡುಗಿ ಆಸೆಗೆ ಕೊಲೆಯಾದ ವೃದ್ದ, ಅಜಯ್, ನಾಗರಾಜ್, ಕಿರಣ್, ನಾಗರಾಜ್ ಕೊಲೆ ಮಾಡಿದ ಬ್ರೋಕರ್ ಗಳು. ಪತ್ನಿಯನ್ನು ಕಳೆದುಕೊಂಡಿದ್ದ ವೃದ್ದನ ಮಕ್ಕಳಿಬ್ಬರು ಮದುವೆಯಾಗಿ ಬೇರೆ ಕಡೆ ಸಂಸಾರ ಮಾಡುತ್ತಿದ್ದ ಕಾರಣ ಒಂಟಿಯಾಗಿದ್ದ ವೃದ್ದನಿಗೆ ಆಸರೆಗೆ ಪತ್ನಿ ಬೇಕಾಗಿದ್ದರಿಂದ ಬ್ರೋಕರ್ ಗೆ 2 ಲಕ್ಷ ರೂ ನೀಡಿ ಹುಡುಗಿ ಹುಡುಕಿಕೊಡುವಂತೆ ಹೇಳಿದ್ದ. ಆದರೆ ಹುಡುಗಿ ಸಿಗದ ಕಾರಣ ಹಣ ವಾಪಸ್ ಕೇಳಿದ್ದಕ್ಕೆ ನಾಲ್ವರು ಸೇರಿ ವೃದ್ದನ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ವೃದ್ದ ತಲೆಗೆ ಬಲವಾದ ಏಟು ಬಿದ್ದ ಕಾರಣ ಮೃತಪಟ್ಟ ವಿಚಾರ ತಿಳಿದು ಪ್ರಕರಣದ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಇದೀಗ ಅವರನ್ನು ಬಂಧಿಸಿದ್ದಾರೆ. 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments