Webdunia - Bharat's app for daily news and videos

Install App

ಟೆಕ್ಕಿಗಳೇ ಟಾರ್ಗೆಟ್, ಹಣ ಕೇಳೋ ನೆಪದಲ್ಲಿ ಮಾಡ್ತಿದ್ರು ಸುಲಿಗೆ..!

Webdunia
ಮಂಗಳವಾರ, 11 ಜುಲೈ 2023 (19:00 IST)
ಮಂಗಳಮುಖಿಯರ ಹಾವಳಿಯಂತೂ ಇತ್ತೀಚೆಗೆ ಕೇಳೋ ಹಾಗೇ ಇಲ್ಲ ಬಿಡಿ. ಅವ್ರಿಗೆ ಸರಿಯಾಗಿ ಕೆಲಸ ಸಿಕ್ಕಲ್ಲ, ಸರಿಯಾಗಿ ಬೆಲೆ ಕೊಡದೆ ಇರೋ ಈ ಸಮಾಜದಲ್ಲಿ ಬದುಕೋಕೆ ಕಷ್ಟ ಅಂತಾ ಅವ್ರು ಕೇಳ್ದಾಗ ಜನ ಅವ್ರಿಗೆ ಹಣ ಕೊಡೋದಲ್ದೆ ಆಶೀರ್ವಾದನೂ ಪಡೀತಾರೆ.. ಆದ್ರೆ ಕೇಳಿ ಪಡೆಯೋದನ್ನ ಬಿಟ್ಟು ಕೆಲ ಮಂಗಳಮುಖಿಯರು ಸುಲುಗೆ ಮಾಡೋಕೆ ಮುಂದಾಗಿದ್ದಾರೆ. ಹೀಗೆ ನಗರದಲ್ಲಿ ಸುಲಿಗೆ ಮಾಡ್ತಿದ್ದ ಮೂವರು ಮಂಗಳಮುಖಿಯರು ಓರ್ವ ಅಟೋ ಡ್ರೈವರ್ ಸೇರಿ ನಾಲ್ವರನ್ನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಸ್ಟೇಷನ್ ನಲ್ಲೂ ಸ್ಟೂಡಿಯೋದಲ್ಲಿ ಪೋಸ್ ಕೊಟ್ಟಂಗೆ ಫೋಟೋಗೆ ಪೋಸ್ ಕೊಟ್ಟಿರೋ ಇವ್ರೇ ನೋಡಿ ಸುಲಿಗೆ ಮಾಡ್ತಿದ್ದ ಮಂಗಳಮುಖಿಯರು.. ಸ್ನೇಹ, ಅವಿಷ್ಕಾ, ದೀಪಿಕಾ ಮತ್ತೆ ಈ ಡ್ರೈವರ್ ಪ್ರಕಾಶ್..  ನಾಲ್ವರೂ ಬಾಪೂಜಿ ನಗರದಲ್ಲಿ ವಾಸವಿದ್ರೂ ಮಾರತ್ತಹಳ್ಳಿ, ಸಂಪಿಗೇಹಳ್ಳಿ, ಕೊಡಿಗೇಹಳ್ಳಿ, ಸಹಕಾರ ನಗರ ಹೀಗೆ ಬೇರೆ ಬೇರೆ ಕಡೆ ಹೋಗಿ ಸುಲಿಗೆ ಮಾಡ್ತಿದ್ರು.. ಮುಂಜಾನೆ ಐದು ಗಂಟೆಗೇ ಆಟೋದಲ್ಲಿ ಫಿಲ್ಡಿಗಿಳಿತಿದ್ದ ನಾಲ್ವರು ಟಾರ್ಗೆಟ್ ಮಾಡ್ತಿದ್ದು ಮಾತ್ರ ಟೆಕ್ಕಿಗಳನ್ನ.. ಐಟಿಬಿಟಿ ಕಂಪನಿಗಳ ಅಕ್ಕಪಕ್ಕದ ರಸ್ತೆ, ಬಸ್ ಸ್ಟ್ಯಾಂಡ್ ಗಳ ಬಳಿ ಓಡಾಡ್ತಿದ್ದವರ ಬಳಿ ಹಣ ಕೇಳೋ ನೆಪದಲ್ಲಿ ಹೋಗ್ತಿದ್ದ ಮಂಗಳಮುಖಿಯರು ಹಣ ಕೊಟ್ರೂನೂ ಅವ್ರ ಬಳಿ ಇದ್ದ ಪರ್ಸ್, ಮೊಬೈಲ್, ಲ್ಯಾಪ್ ಟಾಪ್ ಚಿನ್ನಾಭರಣ ಏನೇ ಇದ್ರೂ ಕಿತ್ತಕೊಂಡು ಎಸ್ಕೇಪ್ ಆಗ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ನಗರದ ಹಲವೆಡೆ ಕೃತ್ಯ ಎಸಗಿದ್ರೂ ಆರೋಪಿಗಳು ಸಿಕ್ಕಿ ಬಿದ್ದಿರಲಿಲ್ಲ.. ಇತ್ತೀಚೆಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳ್ ಬೆಳಗ್ಗೆ ಸುಲಿಗೆ ಮಾಡೋವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.‌

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

ಮುಂದಿನ ಸುದ್ದಿ
Show comments