Select Your Language

Notifications

webdunia
webdunia
webdunia
webdunia

ಛೋಟಾ ರಾಜನ್​, ಬನ್ನಂಜೆ ರಾಜನ್​ ಬಲಗೈ ಬಂಟನಾಗಿದ್ದ ಸುರೇಶ್ ಪೂಜಾರಿ ಬಂಧನ

ಛೋಟಾ ರಾಜನ್​, ಬನ್ನಂಜೆ ರಾಜನ್​ ಬಲಗೈ ಬಂಟನಾಗಿದ್ದ ಸುರೇಶ್ ಪೂಜಾರಿ ಬಂಧನ
bangalore , ಮಂಗಳವಾರ, 19 ಅಕ್ಟೋಬರ್ 2021 (22:24 IST)
ಬೆಂಗಳೂರು: ಚೋಟಾ ರಾಜನ್, ಬನ್ನಂಜೆ ರಾಜನ್ ಬಲಗೈ ಬಂಟನಾಗಿರುವ ಸುರೇಶ್ ಪೂಜಾರಿಯನ್ನು ಇಂಟರ್ ಪೋಲ್ ಫಿಲಿಪೈನ್ಸ್ ನಲ್ಲಿ ಬಂಧಿಸಲಾಗಿದೆ.
ಹಲವು ವರ್ಷಗಳ ಹಿಂದೆ ಮಂಗಳೂರು ಮೂಲದ ಸುರೇಶ್ ಪೂಜಾರಿ ಬಾಂಬೆ ಭೂಗತ ಜಗತ್ತಿಗೆ ಕಾಲಿಟ್ಟಿದ್ದ. ಹೀಗೆ ಮಾರುಕಟ್ಟೆಗೆ ಹೊರಟವನು ನಂತರದ ಚೋಟಾ ರಾಜನ್ ಬಳಿ ಶಿಷ್ಯನಾಗಿ ಸೇರಿಕೊಂಡ. ಆಗ ಚೋಟಾ ರಾಜನ್ ಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ .1992 ರ ದೆಹಲಿ ಬಾಂಬ್ ಸರಣಿ ಸ್ಫೋಟದ ನಂತರ ಬಾಂಬೆ ಡಾನ್ ಗಳೆಲ್ಲ ವಿದೇಶಕ್ಕೆ ಹೋಗಿದ್ದರು. ಆಗಲೂ ಇವನು ಚೋಟಾ ರಾಜನ್ ಜತೆಯಲ್ಲೇ ಕೆಲಸ ಮಾಡುತ್ತಿದ್ದ. 2003 ರಲ್ಲಿ ರವಿ ಪೂಜಾರಿ ಗ್ಯಾಂಗ್ ಸೇರಿದ ಸುರೇಶ್ ಪೂಜಾರಿ ದೇಶವನ್ನ ಬಿಟ್ಟು ವಿದೇಶಕ್ಕೆ ಹಾರಿದ.
ಕೆಲ ಕಾಲ ರವಿ ಪೂಜಾರಿ ಬಲಗೈ ಬಂಟನಾಗಿದ್ದ ಈತ, ಬೆಂಗಳೂರಿನಲ್ಲಿ ರವಿ ಪೂಜಾರಿ ನಡೆಸಿದ ಹಲವು ವ್ಯವಹಾರಗಳಲ್ಲಿ ಪ್ರಮುಖ ಪಾತ್ರವಹಿಸಲಾಗಿದೆ. ಆದರೆ, ನಂತರದ ದಿನಗಳಲ್ಲಿ ರವಿ ಪೂಜಾರಿ ಗ್ಯಾಂಗ್ ತೊರೆದು ತನ್ನದೇ ಗ್ಯಾಂಗ್ ಕಟ್ಟಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚಿನವರೆಗೂ, ನವಮುಂಬೈ ಮತ್ತು ಥಾಣೆಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಲ್ಲಿ ಸುರೇಶ್ ಪೂಜಾರಿ ಹೆಸರು ಕೇಳಿ ಬರುತ್ತಿತ್ತು. ಮುಂಬರುವ ಚುನಾವಣೆಗೆ ನೀಡಿದ ಮಾಹಿತಿಯನ್ನು ಆಧರಿಸಿ ಇಂಟರ್ ಪೋಲ್ ಫಿಲಿಫೈನ್ಸ್ ನಲ್ಲಿ ಸುರೇಶ್ ಪೂಜಾರಿಯನ್ನ ಬಂಧಿಸಲಾಗಿದೆ. ಸದ್ಯ ಆತನ ಭಾರತಕ್ಕೆ ಕರೆತರಲು ಪ್ರಯತ್ನಗಳು ಶುರುವಾಗಿದ್ದು, ಹಳೇ ಕೇಸ್ ಗಳೆಲ್ಲ ಮರು ಜೀವ ಪಡೆಯಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟ್ಯಂತರ ಮೌಲ್ಯದ ಐಶಾರಾಮಿ ಕಾರುಗಳು ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ