Publish Date: Thu, 05 Aug 2021 (14:29 IST)
Updated Date: Thu, 05 Aug 2021 (14:31 IST)
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಕೋಟ ಬಿಜೆಪಿಯಲ್ಲಿ ಇಲ್ಲ. ಜಾತಿ ಕೋಟಾದ ಅಡಿಯಲ್ಲಿ ನನಗೆ ಸಚಿವ ಸ್ಥಾನ ಕೊಟ್ಟಿಲ್ಲ. ಜಾತಿ ಲೆಕ್ಕಾಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್ ನವರು ಜಾತಿ ಆಧಾರಿತ ರಾಜಕಾರಣ ಮಾಡ್ತಾರೆ ಎಂದರು.
ಪರಿಶ್ರಮದಿಂದ ಬೆಳೆದ ಕಾರ್ಯಕರ್ತರಿಗೆ ಪಕ್ಷ ಹೊಸ ಜವಾಬ್ದಾರಿ ಕೊಟ್ಟಿದೆ. ಹಗಲು ರಾತ್ರಿ ಕೆಲಸ ಮಾಡಿ ವರಿಷ್ಠರ ನಿರೀಕ್ಷೆಯನ್ನ ಪೂರ್ಣ ಮಾಡುತ್ತೇನೆ. ನಾನು ಮಂತ್ರಿಗಿರಿಯನ್ನ ನಿರೀಕ್ಷಿಸಿರಲಿಲ್ಲ. ಆದ್ರೂ ಪಕ್ಷ ಜವಬ್ದಾರಿ ನೀಡಿದೆ. ಯಾವ ಖಾತೆ ಕೊಟ್ರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಬಿ.ಸಿ ನಾಗೇಶ್ ಹೇಳಿದರು.