Webdunia - Bharat's app for daily news and videos

Install App

ಜೆಡಿಎಸ್ ವಿರುದ್ಧ ಸುಮಲತಾ ಕಿಡಿ

Webdunia
ಬುಧವಾರ, 20 ಮಾರ್ಚ್ 2019 (19:21 IST)
ನನ್ನ ಅಸ್ತಿತ್ವಕ್ಕಾಗಿಯೂ ಅಲ್ಲ, ನಾನು ನನ್ನ ಅಸ್ತಿತ್ವವನ್ನ ಸಿನಿಮಾರಂಗದ ಮೂಲಕ ಕಾಪಾಡಿಕೊಂಡಿದ್ದೇನೆ.

ಆದರೆ ಮಂಡ್ಯದ ಜನರು, ‌ಕಾಂಗ್ರೆಸ್ಸಿಗರು ರಾಜಕೀಯಕ್ಕೆ ಬರಲೇಬೇಕೆಂದು ಒತ್ತಡ ಹೇರಿದರು. ಹೀಗಾಗಿ ನಾನು‌ ರಾಜಕೀಯಕ್ಕೆ ಬರುವ ಮೊದಲೇ ಜೆಡಿಎಸ್ ನಾಯಕರು ಅವರು ಕಾಂಗ್ರೆಸ್‌ನಲ್ಲಿದ್ದವರು ಎಂದು ಹೇಳಿದ್ರು. ಇನ್ನು ಕಾಂಗ್ರೆಸ್ ಕಾರ್ಯಕರ್ತರ ‌ಅಸ್ತಿತ್ವಕ್ಕಾಗಿಯಾದರೂ ನನಗೆ ಟಿಕೆಟ್ ಕೊಡಿಸಿ ಎಂದಾಗ ಕಾಂಗ್ರೆಸ್ ನಾಯಕರು ನಾವು ನಿಸ್ಸಾಯಕರು ಎಂದು ಹೇಳಿದ್ರು. ಹೀಗಂತ ಸುಮಲತಾ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಮಂಡ್ಯದಲ್ಲಿ ಮೈತ್ರಿ ಧರ್ಮ‌ ಎಲ್ಲಿ ಪಾಲಿಸುತ್ತಿದ್ದಾರೆ? ನಮ್ಮ ಕಾರ್ಯಕರ್ತರಿಗೆ ಧಮ್ಕಿ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ನಮ್ಮ ಮುಂದೆ ಹಿಮಾಲಯ ಪರ್ವತ ಏರುವಂತ ದೊಡ್ಡ ಸವಾಲಿದೆ. ನಿವುಗಳು ನನ್ನ ಜೊತೆ ಇದ್ದರೆ ನಾನು ಸವಾಲನ್ನ ಸ್ವೀಕರಿಸುತ್ತೇನೆ
ಪರೋಕ್ಷವಾಗಿ ಜೆಡಿಎಸ್‌ ವಿರುದ್ದ ವಾಗ್ದಾಳಿ ನಡೆಸಿದರು. ಇನ್ನು ಮುಂದಿನ ನನ್ನ ಸವಾಲುಗಳಿಗೆ ನೀವೆ ಉತ್ತರಿಸಬೇಕು.
ಚಿತ್ರರಂಗದವರನ್ನ ಯಾರು ಬಳಸಿಕೊಂಡಿಲ್ಲವೇ? ಯಾರು ಯಾವ ಕಲಾವಿದರನ್ನ ಪ್ರಚಾರ ಬಳಸಿಕೊಂಡಿದ್ದಾರೆ ಎಂಬುದು ನಿಮಗೆಲ್ಲಾ ತಿಳಿದಿದೆ. ಅಂಬರೀಶ್ ಮೇಲಿನ ಪ್ರೀತಿಯಿಂದ ಚಿತ್ರರಂಗ ನನ್ನ ಪರವಾಗಿದೆ ಎಂದರು.

ತಾಯಿಗಾಗಿ ಮಕ್ಕಳು ಪ್ರಚಾರಕ್ಕೆ ಬರುವುದು ತಪ್ಪಾ? ಯಶ್, ದರ್ಶನ್ ನಮ್ಮ ಮನೆ ಮಕ್ಕಳು. ಅಂಬರೀಶ್, ಯಶ್, ದರ್ಶನ್‌ಗೆ ಇಡೀ ಇಂಡಿಯಾದಲ್ಲಿ ಅಭಿಮಾನಿಗಳಿದ್ದಾರೆ. ನಿಮ್ಮ ಮಾತಿನಿಂದ ಅವರ ಮೇಲಿನ‌ ಅಭಿಮಾನ ಕಡಿಮೆಯಾಗಲ್ಲ. ಆದರೆ ನೀವು ಸ್ಪರ್ಧಿಸುವ ಕ್ಷೇತ್ರಗಳಲ್ಲೂ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಿಗಳು ತಕ್ಕಪಾಠ ಕಲಿಸುತ್ತಾರೆ ನಿಮಗೆಲ್ಲಾ ಎಂದು ತಿರುಗೇಟು ನೀಡಿದ್ರು.

ನಾನು ಗೆದ್ದರೆ ಮಲೆಷಿಯಾದಲ್ಲಿರ್ತಾರೆ ಮಂಡ್ಯಕ್ಕೆ ಬರಲ್ಲಾ ಅಂತ ಟೀಕೆ ಮಾಡ್ತಾರೆ. ನಾನು ಎಲ್ಲಾ ಕಂಟ್ರಿಗಳನ್ನ ನೋಡಿದ್ದೇನೆ, ಅಂಬರೀಶ್ ನಿಜವಾಗಿ ಎಲ್ಲಾ ದೇಶ ಸುತ್ತಿಸಿದ್ದಾರೆ ಅಂತಾ ಟೀಕಾಕಾರರಿಗೆ ತಿರುಗೇಟು ನೀಡಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

14ದಿನ ನ್ಯಾಯಾಂಗ ಬಂಧನಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಕಾನೂನಿನ ಮುಂದಿನ ನಡೆಯೇನು

ನವದೆಹಲಿ ಪೊಲೀಸ್ ಆಯುಕ್ತರಾಗಿ ಸತೀಶ್‌ ಗೋಲ್ಚಾ ನೇಮಕ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಮುಂದಿನ ಸುದ್ದಿ
Show comments