Select Your Language

Notifications

webdunia
webdunia
webdunia
webdunia

ಸಾಹಿತಿ ನಿಸಾರ್ ಅಹ್ಮದ್ ಅಗಲಿಕೆಗೆ ಸುಮಲತಾ ಅಂಬರೀಶ್, ಸಿ.ಟಿ.ರವಿ ಸಂತಾಪ

ಸಾಹಿತಿ ನಿಸಾರ್ ಅಹ್ಮದ್ ಅಗಲಿಕೆಗೆ ಸುಮಲತಾ ಅಂಬರೀಶ್, ಸಿ.ಟಿ.ರವಿ ಸಂತಾಪ
ಮಂಡ್ಯ , ಭಾನುವಾರ, 3 ಮೇ 2020 (17:34 IST)
ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ಅಗಲಿಕೆಗೆ ಸಂಸದೆ ಸುಮಲತಾ ಅಂಬರೀಶ್, ಸಚಿವ ಸಿ.ಟಿ.ರವಿ ಸಂತಾಪ ಸೂಚಿಸಿದ್ದಾರೆ.

ಜೋಗದ ಸಿರಿಯನ್ನು ನಯಾಗರದಾಚೆಗೂ ದಾಟಿಸಿದ ಕವಿ,  ಸಮಾಜವನ್ನು ಕುರಿ ಮಂದೆಯಾಗದಂತೆ ಶಬ್ದಗಳಲ್ಲೇ ಎಚ್ಚರಿಸಿದವ ಸಂತ ಸದೃಶ-ಸಂವೇದನಾಶೀಲ. ಸೂಟು ಬೂಟು ಧಿರಿಸಿನ ಅಪ್ಪಟ ಮೈಸೂರು ಪೇಟದ ಮನಸ್ಸಿನ ನಿಸಾರ ಅಹಮದ್ ಅವರ ದೇಹಾಂತ್ಯ ಕನ್ನಡಮ್ಮನ ಮಕ್ಕಳಿಗೆ ತುಂಬಲಾರದ ನೋವು.

ಅವರು ಬರೆಯುತ್ತಿರಲಿ, ಬರೆಯದೇ ಇರುತ್ತಿರಲಿ ನಿಸಾರರ ಉಪಸ್ಥಿತಿ ಕನ್ನಡಕ್ಕೊಂದು ಧೈರ್ಯ ವನ್ನು ತುಂಬುತ್ತಿತ್ತು. ಇನ್ನವರ ಸಾಲುಗಳು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹೀಗಂತ ಸಂಸದೆ ಸುಮಲತಾ ಅಂಬರೀಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿತ್ಯೋತ್ಸವ ಕವಿ ಎಂದೆ  ಹೆಸರಾಗಿದ್ದ ನಿಸಾರ್ ಅಹ್ಮದ್ ಅವರು ಸಾಹಿತ್ಯ  ರಚನೆಯಿಂದ  ಕನ್ನಡ ಸಾಹಿತ್ಯವನ್ನು  ಶ್ರೀಮಂತಗೊಳಿಸಿದ್ದರು. ಅವರ  ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ  ತುಂಬಲಾರದ ನಷ್ಟವನ್ನು ಉಂಟುಮಾಡಿದೆ  ಎಂದು ಸಚಿವ ಸಿ.ಟಿ.ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಾರದಲ್ಲಿ ನಾಲ್ಕೇ ದಿನ ಮದ್ಯ ಮಾರಾಟ : ಬಸ್ ಸಂಚಾರಕ್ಕೆ ಬ್ರೇಕ್