Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ

ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ
bangalore , ಮಂಗಳವಾರ, 19 ಏಪ್ರಿಲ್ 2022 (21:17 IST)
ಎತ್ತಿನಹೊಳೆ‌ ಯೋಜನೆಯಿಂದ 2 ವರ್ಷದಲ್ಲಿ ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರಕ್ಕೆ‌ ನೀರು ಕೊಡುವ ಕೆಲಸ ಮಾಡ್ತೀನಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ನಮಗೆ ಭರವಸೆ ನೀಡಿದ್ದಾರೆ. ಆ ಭರವಸೆಯನ್ನ ನಾನು ನಂಬಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ, ಚುನಾವಣೆಗಳು ಹತ್ತಿರ ಇರುವಾಗ ವಿಪಕ್ಷಗಳ ಹೋರಾಟ ಸ್ವಾಭಾವಿಕ. ಆದ್ರೆ ಅವರು ಸಾಗುತ್ತಿರುವ ಹಾದಿ ತಪ್ಪು. ಕಾಂಗ್ರೆಸ್​​​ನವರು ತಪ್ಪು ದಾರಿ ಹಿಡಿದಿದ್ದಾರೆ. ರಾಜ್ಯ ಸುಸಂಸ್ಕೃತ ರಾಜಕಾರಣಕ್ಕೆ ಮಾದರಿಯಾಗಿದೆ. ಆ ಹಾದಿ ಹಿಡಿದ್ರೆ ಒಳ್ಳೆಯದಾಗುತ್ತೆ, ತಪ್ಪು ದಾರಿ ಹಿಡಿದರೆ ಹಳ್ಳ ಹಿಡಿಯೋದು ಗ್ಯಾರಂಟಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘Mr. ಸುಳ್ಳುರಾಮಯ್ಯ ರಾಜಕೀಯ ಊಸರವಳ್ಳಿ’